Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಲೋಕಸೇವಾ ಆಯೋಗವನ್ನು ಶುದ್ಧೀಕರಿಸಿ

$
0
0

ಕರ್ನಾಟಕ ಲೋಕಸೇವಾ ಆಯೋಗ ಸಂವಿಧಾನಿಕ ಸಂಸ್ಥೆ. ಪ್ರತಿಭೆ, ಕಾರ್ಯದಕ್ಷತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಡಳಿತಕ್ಕೆ ಹೊಸ ಶಕ್ತಿ, ಹುಮ್ಮಸ್ಸು ತುಂಬಬೇಕಾದ ಗುರುತರ ಹೊಣೆ ಅದರ ಮೇಲಿದೆ. ಯೋಗ್ಯರನ್ನು ಆಯ್ಕೆ ಮಾಡಿದರೆ ಆಡಳಿತವೂ ದಕ್ಷತೆ ಮತ್ತು ಪರಿಣಾಮಕಾರಿಯಾಗಿರುತ್ತದೆ. ಅಷ್ಟರ ಮಟ್ಟಿಗೆ ಪ್ರಜಾಪ್ರಭುತ್ವವೂ ಹೆಚ್ಚು ಚೈತನ್ಯಶೀಲವಾಗಿರುತ್ತದೆ. ಆದರೆ ಕಳೆದ ಒಂದೂವರೆ ದಶಕದಿಂದ ಆಯೋಗ ನಡೆಸಿರುವ ಅವ್ಯವಹಾರ, ಅಕ್ರಮ, ಸ್ವಜನಪಕ್ಷಪಾತಗಳಿಗೆ ಮೇರೆಗಳೇ ಇಲ್ಲ. ಇದರಿಂದ ಲೋಕಸೇವಾ ಆಯೋಗ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ದುಃಸ್ವಪ್ನವಾಗಿದೆ. 1998ರ ಕೆಎಎಸ್‌ ಪರೀಕ್ಷೆಯಲ್ಲಿ ಒಂದೇ ಕುಟುಂಬದ ನಾಲ್ವರು ಗೋಲ್‌ಮಾಲ್‌ ಮಾಡಿ ಉನ್ನತ ಶ್ರೇಯಾಂಕ ಪಡೆದಿದ್ದರು. ಗಜೆಟೆಡ್‌ ಪೊ›ಬೆಷನರ್‌ ಹುದ್ದೆಗಳ ನೇಮಕವಂತೂ ಸದಾಕಾಲ ವಿವಾದಗಳ ಜೇನುಗೂಡಾಗಿಯೇ ಇರುತ್ತದೆ. 2015ರಲ್ಲಿ ಆಯೋಗದ ಐವರು ಕಳಂಕಿತ ಸದಸ್ಯರನ್ನು ಸರಕಾರ ಅಮಾನತುಗೊಳಿಸಿತ್ತು. ಈ ಸಂಸ್ಥೆಯ ಘನತೆವೆತ್ತ ಅಧ್ಯಕ್ಷರೊಬ್ಬರು ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿದ್ದರು. ಸಂವಿಧಾನಿಕ ಸಂಸ್ಥೆಯೊಂದರ ಘನತೆ, ಗೌರವ ಈ ಪರಿ ಮಣ್ಣುಪಾಲಾದ ನಿದರ್ಶನ ಭಾರತದ ಯಾವ ರಾಜ್ಯದಲ್ಲೂ ಇಲ್ಲ. ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಅದು ಆಯೋಗವನ್ನು ತನ್ನ ಕೈ ಗೊಂಬೆಯನ್ನಾಗಿ ಮಾಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದು ಸಾಮಾನ್ಯವಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಆಯೋಗದ ಶುದ್ಧೀಕರಣ ಮಾಡುವ ಸಂಕಲ್ಪವನ್ನು ಪ್ರಕಟಿಸಿತ್ತು. ಇದಕ್ಕಾಗಿ ಹೂಟಾ ಸಮಿತಿಯನ್ನು ರಚಿಸಿ ಶಿಫಾರಸುಗಳನ್ನು ಪಡೆದಿತ್ತು. ಸಮಿತಿ ಶಿಫಾರಸಿನಂತೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪ್ರಮಾಣವನ್ನು 1:5ರ ಬದಲಿಗೆ 1.3ಕ್ಕೆ ಇಳಿಸಿತ್ತು, ಇದೀಗ ಸರಕಾರ ಹಳೇ ವ್ಯವಸ್ಥೆಗೆ ಶರಣಾಗಿದೆ. ಇನ್ನು ಮುಂದೆ ಒಂದೇ ಹುದ್ದೆಗೆ ಐವರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವ ವ್ಯವಸ್ಥೆ ಗೆ ಸಿದ್ದು ಸಂಪುಟ ಅನುಮೋದನೆ ನೀಡಿದೆ.

ಇದು ಸ್ಪರ್ಧೆಗೆ ಅವಕಾಶ ನೀಡುತ್ತದೆ ಎಂಬುದು ಸರಕಾರದ ವಾದ. ಆದರೆ ಈ ಕ್ರಮ 'ನೋಟು ಎತ್ತುವಳಿ'ಯಲ್ಲದೆ ಬೇರೇನೂ ಅಲ್ಲ. ಇಷ್ಟಕ್ಕೂ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಅಳೆಯುವುದಕ್ಕೆ ಕೆಪಿಎಸ್‌ಸಿಯಲ್ಲಿ ಒಂದು ಪ್ರಮಾಣಿತ ಮಾನದಂಡವೇನೂ ಇಲ್ಲ. ವಿವಾದ ಮತ್ತು ಕಳಂಕದಿಂದ ದೂರ ಇರುವ ಯುಪಿಎಸ್‌ಸಿ ಕ್ರಮಗಳನ್ನೇನೂ ಕೆಪಿಎಸ್‌ಸಿ ಯಾವತ್ತೂ ಮಾದರಿಯಾಗಿ ಇಟ್ಟುಕೊಂಡಿಲ್ಲ. ಸಂದರ್ಶನ ಎಂಬುದು ದುರ್ಬಲ ಭೂಮಿಕೆಯ ಮೇಲೆ ಇದ್ದಾಗ ಅಭ್ಯರ್ಥಿಗಳ ಹಣೆಬರಹ ಹಾವು ಏಣಿಯಾಟವಾಗಿಬಿಡುತ್ತದೆ. ದಕ್ಷಿಣೆ ಕೊಟ್ಟವರನ್ನು ಮೇಲೇಕ್ಕೇರಿಸಬಹುದು, ಕಾಸಿಲ್ಲದವರನ್ನು ಕೆಳಕ್ಕೆ ತಳ್ಳಬಹುದು.

1;3 ಅನುಪಾತವಿದ್ದಾಗಲೂ ಭಾರಿ ಅಕ್ರಮಗಳು ನಡೆಯುತ್ತವೆ ಎಂದಾದಾಗ ಇದನ್ನು 1:5ಕ್ಕೆ ಹೆಚ್ಚಿಸಿದಾಗ ಆಗುವ ಆನಾಹುತಗಳನ್ನು ಯಾರೇ ಆಗಲಿ ಸುಲಭವಾಗಿ ಊಹಿಸಬಹುದು.

ಕೆಪಿಎಸ್‌ಸಿಗೆ ಕಾಯಕಲ್ಪ ನೀಡುವ ಈಗಿನ ಸರಕಾರದ ಭರವಸೆ ಮಣ್ಣು ಪಾಲಾಗಿದೆ. ಸಾರ್ವತ್ರಿಕ ವಿರೋಧ ಮತ್ತು ಹೋರಾಟಕ್ಕೆ ಕವಡೆ ಕಿಮ್ಮತ್ತನ್ನೂ ಕೊಡದೆ ಕಳಂಕಿತರೊಬ್ಬರನ್ನು ಆಯೋಗದ ಅಧ್ಯಕ್ಷ ಗಾದಿಗೆ ಕೂಡಿಸಿದಾಗಲೇ ನಮ್ಮ ಅಧಿಕಾರಸ್ಥರು ' ಹೇಳುವುದು ಒಂದು ಮಾಡುವುದು ಇನ್ನೊಂದು' ಎಂಬುದು ರುಜುವಾತಾಗಿದೆ.

ಕೆಪಿಎಸ್‌ಸಿಗೆ ಕಾಯಕಲ್ಪ ನೀಡಲೇಬೇಕು. ಕಳಂಕಿತ ನೇಮಕಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ದಂಡನೆ ವಿಧಿಸಬೇಕು. ಪಾರದರ್ಶಕತೆ ಇರುವೆಡೆ ವಿಶ್ವಾಸಾರ್ಹತೆ ಇರುತ್ತದೆ. ಈ ಎರಡೂ ಮೌಲ್ಯಗಳು ಮುಕ್ಕಾಗದಂತೆ ನೋಡಿಕೊಳ್ಳಬೇಕು. ವ್ಯಾಪಕ ಜನಾಂದೋಲನದಿಂದ ಮಾತ್ರ ಇದು ಸಾಧ್ಯವಾಗುತ್ತದೆ.



Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>