Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಪಡಿತರ ಚೀಟಿ ಪರಿಶೀಲನೆ ಬೇಡ್ವೆ ಬೇಡ

$
0
0

ಹಾವೇರಿ: ಪಡಿತರ ಚೀಟಿ ಕೆಲಸಕ್ಕೆ ಮುಕ್ತಿಕೊಡಿ.. ಒತ್ತಡದ ಆತ್ಮಹತ್ಯೆಗೆ ಅಂತ್ಯ ನೀಡಿ.. ಈ ಮನ ಕಲಕುವ ಮನವಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳದು.

ಪೂರ್ವ ನಿಗದಿಯಂತೆ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸಾಮೂಹಿಕ ರಜೆ ಪಡೆದು ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಪಾಟೀಲ ಹಾಗೂ ಗೌರವಾಧ್ಯಕ್ಷ ಎಂ.ಸಿ. ಮೋಟಗಿ, ಗ್ರಾಮ ಲೆಕ್ಕಾಧಿಕಾರಿ ಎಂದರೆ ಆತನಿಗೆ ನಿಯೋಜಿಸಿದ ಊರು ಸೇರಿದಂತೆ ಅಕ್ಕಪಕ್ಕದ ಕನಿಷ್ಟ 2-3 ಊರುಗಳ ಎಲ್ಲ ಮಾಹಿತಿ ಜತೆಗೆ ಸರಕಾರದ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ತಹಸೀಲ್ದಾರ್‌ ಕಚೇರಿಗೆ ನೀಡಬೇಕು. ಬರದ ಸಂದರ್ಭದಲ್ಲಿ ಮುಂಗಾರ ಮತ್ತು ಹಿಂಗಾರು ಬೆಳೆ ಸಮೀಕ್ಷೆ ಕೈಗೊಂಡು ವರದಿ ನೀಡಬೇಕು. ವಿವಾಹ ನೋಂದಣಿ, ಜನನ-ಮರಣ ದಾಖಲಾತಿ, ಜನ-ಜಾನುವಾರು ಗಣತಿ, ಬೆಳೆ ಪಹಣಿ, ಜಮಾ ಬಂದಿ, ಸರಕಾರಿ ಜಮೀನು ಒತ್ತುವರಿ ತೆರವು, ಓಟಿಸಿ ಬೆಳೆ ಕಟಾವು ಪ್ರಯೋಗ, ಡಾಟಾ ಎಂಟ್ರಿ ಹೀಗೆ ದಿನದ ಇಪತ್ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಇದ್ದೇವೆ. ಈಗ ಪಡಿತರ ಚೀಟಿ ಪರಿಶೀಲನೆ ಕೆಲಸವನ್ನು ಸಹ ಪಿಡಿಒ ಬದಲಿಗೆ ಗ್ರಾಮ ಲೆಕ್ಕಾಧಿಕಾರಿಗೆ ವಹಿಸಿದರೆ ನಮ್ಮ ಗತಿ ಏನು? ಈ ಒತ್ತಡದ ಕಾರಣಕ್ಕೆ ಮಾನಸಿಕವಾಗಿ ನೊಂದು ಮಹಿಳಾ ಗ್ರಾಮಲೆಕ್ಕಾಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ.

ಪಡಿತರ ಚೀಟಿ ಪರಿಶೀಲನೆ ವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ದೈಹಿಕ ಹಲ್ಲೆಗಳು ನಡೆದು ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ರಾಜ್ಯದ ಹಲವೆಡೆ ಸಂಭವಿಸಿವೆ. ಮಾತೃ ಇಲಾಖೆ ಕೆಲಸದ ಜತೆಗೆ ಆನ್‌ಲೈನ್‌ ಮೂಲಕ ಇನ್‌ಫುಟ್‌ ಸಬ್ಸಿಡಿ ಡಾಟಾ ಎಂಟ್ರಿ ಕೆಲಸ ಜತೆ ಪಡಿತರ ಚೀಟಿ ಪರಿಶೀಲನೆಯಿಂದ ಸಕ್ಕರೆ ಕಾಯಿಲೆ, ಬಿ.ಪಿ. ಹೆಚ್ಚಾಗಿ ವಿವಿಧ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಡಿತರ ಚೀಟಿ ಪರಿಶೀಲನೆ ಕೆಲಸ ಬೇಡವೇ ಬೇಡ. ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದೂ ಬೇಡ. ನಮ್ಮ ಕೆಲಸ ನಮಗೆ ಪಡಿತರ ಚೀಟಿ ಪರಿಶೀಲನೆ ಬೇರೆಯವರಿಗೆ ವಹಿಸಿ ನಮ್ಮ ಇಲಾ ಖೆಯ ಕೆಲಸವನ್ನು ನೆಮ್ಮದಿಯಿಂದ ಮಾಡಲು ಅವಕಾಶ ಕೊಡಿ ಎಂದು ಹಕ್ಕೊತ್ತಾಯ ಮಂಡಿಸಿದರು.

ಗ್ರಾಪಂನಲ್ಲಿ ಬಿಲ್‌ ಕಲೆಕ್ಟರ್‌, ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ ಹೀಗೆ ಕನಿಷ್ಟ 7-8 ಸಿಬ್ಬಂದಿ ಇದ್ದೇ ಇರುತ್ತಾರೆ. ಅವರಿಗೆ ಪಡಿತರ ಚೀಟಿ ಪರಿಶೀಲನೆ ಕೆಲಸ ಕಷ್ಟ ವಲ್ಲ. ಈ ಕೆಲಸವನ್ನು ಪುನಃ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಿರುವ ಕಾರಣಕ್ಕೆ ನಿತ್ಯದ ಕೆಲಸ ಸ್ಥಗಿತಗೊಂಡು ಗ್ರಾಮಸ್ಥರು ಮನೆಗೆ ಬಂದು ಗಲಾಟೆ ಮಾಡುವುದು, ದಾರಿಯಲ್ಲಿ ಹಲ್ಲೆ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸರಕಾರದ ಸುತ್ತೋಲೆ ಹಿಂಪಡೆಯಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ತಮಗೆ ಆಗುತ್ತಿರುವ ನೋವು-ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಜತೆ ಹೇಳಿಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು ಮುಂದಾದರೂ ಅವಕಾಶ ನಿರಾಕರಿಸಿದರು.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>