Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕಲಾವಿದರ ಸುರಕ್ಷೆಗೆ ಬೇಕಿದೆ ಕಠಿಣ ಕಾನೂನು

$
0
0

ಮಾಸ್ತಿಗುಡಿ ಚಿತ್ರೀಕರಣದ ವೇಳೆಯ ದುರಂತದ ನಂತರ ಸಾಹಸ ನಿರ್ದೇಶಕರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಈ ಸಿನಿಮಾದ ಇಬ್ಬರು ಕಲಾವಿದರ ಸಾವಿಗೆ ಸುರಕ್ಷತೆ ಕ್ರಮಗಳು ಇಲ್ಲದಿರುವುದೇ ಕಾರಣ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸಾಹಸ ದೃಶ್ಯಗಳು ಸಿನಿಮಾದ ಒಂದು ಭಾಗವೇ ಆಗಿರುವುದರಿಂದ ಮತ್ತೆ ಇಂತಹ ಅವಘಡ ಆಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ.

- ಶಶಾಂಕ್‌

ಅದು ಜರಾಸಂಧ ಚಿತ್ರವನ್ನು ನಾನು ನಿರ್ದೇಶನ ಮಾಡುತ್ತಿದ್ದ ಸಮಯ. ಸಾಕಷ್ಟು ಸಾಹಸ ದೃಶ್ಯಗಳು ಆ ಸಿನಿಮಾದಲ್ಲಿದ್ದವು. ಸಾಹಸ ನಿರ್ದೇಶಕರು ಅಂಥ ದೃಶ್ಯಗಳನ್ನು ಹೇಗೆ ಕಂಪೋಸ್‌ ಮಾಡಲಾಗಿದೆ ಎಂಬುದನ್ನು ವಿವರಿಸಿದ್ದರು. ನಿಜಕ್ಕೂ ಅವು ಅಪಾಯದ ದೃಶ್ಯಗಳೇ ಆಗಿದ್ದವು. ಸುರಕ್ಷತೆಯ ಕ್ರಮದ ಬಗ್ಗೆ ನಾನು ತಿಳಿದುಕೊಳ್ಳಲು ಬಯಸಿದಾಗ ಅಚ್ಚರಿಯ ಸಂಗತಿಗಳು ಹೊರಬಿದ್ದವು. ಅಸಲಿಯಾಗಿ ಸಾಹಸ ಕಲಾವಿದರಿಗೆ ಸುರಕ್ಷತೆ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂತು. ‘ಏನ್ರೀ ಇದೆಲ್ಲ. ನಿಮ್ಮ (ಸಾಹಸ ಕಲಾವಿದರ) ಯೂನಿಯನ್‌ನಲ್ಲಿ ಈ ಬಗ್ಗೆ ಚರ್ಚೆಸಬೇಕಲ್ಲ’ ಅಂತ ಕೇಳಿದ್ದೆ. ‘ಮೀಟಿಂಗ್‌ ಇದ್ದಾಗ ಹೇಳುತ್ತೇವೆ. ಆದರೆ, ಅದು ಜಾರಿಗೆ ಬಾರದು’ ಎಂಬ ಅವರ ಉತ್ತರ ನನ್ನನ್ನು ಮತ್ತಷ್ಟು ಆತಂಕಕ್ಕೆ ದೂಡಿತ್ತು. ನಾನು ಈಗ ಹೇಳುತ್ತಿರುವುದು ಮೂರು ವರ್ಷಗಳ ಹಿಂದಿನ ಮಾತು. ಆವತ್ತೇ ಈ ಕುರಿತು ಎಚ್ಚರಿಕೆ ತೆಗೆದುಕೊಂಡಿದ್ದರೆ ಮಾಸ್ತಿಗುಡಿ ಸಿನಿಮಾ ಶೂಟಿಂಗ್‌ ದುರಂತದಲ್ಲಿ ಜಲಸಮಾಧಿಯಾದ ಅನಿಲ್‌ ಮತ್ತು ಉದಯ್‌ ಬದುಕಿರುತ್ತಿದ್ದರೇನೊ?

ಮಾಸ್ತಿಗುಡಿ ಚಿತ್ರೀಕರಣದ ವೇಳೆಯ ದುರಂತ ಕಂಡಾಗ ನನಗೆ ಥಟ್ಟನೆ ನೆನಪಾಗಿದ್ದು ಎನಿಮಲ್‌ ಬೋರ್ಡ್‌ ಕಾನೂನು.

ನಮಗೆಲ್ಲ ಗೊತ್ತಿರುವಂತೆ ಸಿನಿಮಾದಲ್ಲಿ ಎಂತಹ ದೃಶ್ಯಗಳನ್ನಾದರೂ ಚಿತ್ರೀಕರಿಸಬಹುದು. ಪ್ರಾಣಿಗಳನ್ನು ಬಳಸಿಕೊಂಡು ದೃಶ್ಯ ಕಟ್ಟುವುದು ಸುಲಭವಲ್ಲ. ಅದೆಂತಹ ಬುದ್ಧಿವಂತ ನಿರ್ದೇಶಕನಿದ್ದರೂ, ಎನಿಮಲ್‌ ಬೋರ್ಡ್‌ ಕಣ್ಣಿಗೆ ಮಣ್ಣೆರಚೋಕೆ ಆಗುವುದಿಲ್ಲ. ಅಂತಹ ಕಟ್ಟುನಿಟ್ಟಿನ ಕ್ರಮಗಳು ಅಲ್ಲಿವೆ. ಚಿತ್ರೀಕರಣದಲ್ಲಿ ಬಳಸುವ ಪ್ರಾಣಿಗಳಿಗೆ ಹಿಂಸೆ ನೀಡುತ್ತಾರೆಂಬ ಕೂಗಿಗೆ ಆರಂಭವಾದ ಈ ಬೋರ್ಡ್‌ ಅಷ್ಟು ಸುಲಭಕ್ಕೆ ಪ್ರಾಣಿಗಳನ್ನು ಶೂಟಿಂಗ್‌ನಲ್ಲಿ ಬಳಸುವುದಕ್ಕೆ ಬಿಡುವುದಿಲ್ಲ.

ಈ ಬೋರ್ಡ್‌ ಎಷ್ಟು ಸ್ಟ್ರಾಂಗ್‌ ಆಗಿದೆ ಅಂದರೆ, ನಾವು ಶೂಟಿಂಗ್‌ ಮಾಡುವಾಗ ಅಕಸ್ಮಿಕವಾಗಿ ನಾಯಿ ಬಂದರೂ ಅದರ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಹಾಗಾಗಿ ಅಕಸ್ಮಿಕವಾಗಿ ಬರುವ ಪ್ರಾಣಿಗಳನ್ನು ತಡೆಯುವುದಕ್ಕಾಗಿಯೇ ಶೂಟಿಂಗ್‌ ಸಮಯದಲ್ಲಿ ಮುತುವರ್ಜಿ ವಹಿಸಿರುತ್ತೇವೆ. ಪ್ರಾಣಿಗಳು ಕ್ಯಾಮೆರಾಗೆ ಕಾಣಿಸದಂತೆ ಎಚ್ಚರಿಕೆವಹಿಸುತ್ತೇವೆ.

ಅನಿವಾರ‍್ಯವಾಗಿ ದೃಶ್ಯದಲ್ಲಿ ಪ್ರಾಣಿಯನ್ನು ಬಳಸಬೇಕು ಅಂದರೆ, ಅದು ಯಾವ ಪ್ರಾಣಿ ಮತ್ತು ಅದನ್ನು ಯಾವ ದಿನಾಂಕದಂದು ಚಿತ್ರೀಕರಣಕ್ಕೆ ಕರೆತರುತ್ತೇವೆ ಎಂಬ ಮಾಹಿತಿಯನ್ನು ಮೊದಲೇ ಎನಿಮಲ್‌ ಬೋರ್ಡ್‌ಗೆ ತಿಳಿಸಿರಬೇಕು. ಅಲ್ಲದೇ ಪ್ರಾಣಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿರಬೇಕು. ಶೂಟಿಂಗ್‌ ಸಮಯದಲ್ಲಿ ಅದಕ್ಕೆ ಯಾವುದೇ ತೊಂದರೆ ಆಗಿಲ್ಲ ಅನ್ನುವ ದೃಢೀಕರಣ ಪತ್ರವನ್ನು ಪ್ರಾಣಿಗಳ ಮಾಲೀಕರಿಂದ ಪಡೆಯಬೇಕು. ವೈದ್ಯರು ಸರ್ಟಿಫಿಕೇಟ್‌ ತೆಗೆದುಕೊಳ್ಳಬೇಕು. ಚಿತ್ರೀಕರಣವಾದ ನಂತರ ಆ ದೃಶ್ಯವನ್ನು ನಾವು ಮತ್ತೆ ಎನಿಮಲ್‌ ಬೋರ್ಡ್‌ಗೆ ಕಳುಹಿಸಿ ಅವರಿಂದಲೂ ಪತ್ರ ಪಡೆಯಬೇಕು. ಆಗ ನಮ್ಮ ಸಿನಿಮಾ ಸೆನ್ಸಾರ್‌ ಆಗುತ್ತದೆ. ಇಲ್ಲದೇ ಇದ್ದರೆ, ಯಾವುದೇ ಕಾರಣಕ್ಕೂ ಸೆನ್ಸಾರ್‌ ಆಗಲು ಬಿಡುವುದಿಲ್ಲ.

ಒಂದು ಪ್ರಾಣಿಯ ಜೀವ ಉಳಿಸೋಕೆ ಇಷ್ಟೊಂದು ಸುರಕ್ಷತಾ ಕಾನೂನು ಇರುವಾಗ, ಮನುಷ್ಯನ ಜೀವ ಉಳಿಸೋಕೆ ಏನೂ ಇಲ್ಲವಲ್ಲ ಅನ್ನುವುದೇ ದುರಂತ. ಸಾಹಸಗಳನ್ನು ಮಾಡುವಾಗ ಸಣ್ಣ ಪುಟ್ಟ ಏಟುಗಳು ಬೀಳುತ್ತಲೇ ಇರುತ್ತವೆ. ಅದೆಷ್ಟೋ ಸಾಹಸ ಕಲಾವಿದರು ಕೈ, ಕಾಲುಗಳನ್ನು ಮುರಿದುಕೊಂಡು ಈಗಲೂ ನೋವು ಅನುಭವಿಸುತ್ತಿದ್ದಾರೆ. ಅವರ ಜೀವಕ್ಕೆ ಬೆಲೆನೇ ಇಲ್ಲವಾ? ಈ ಕುರಿತು ಗಂಭೀರವಾದ ಕಾನೂನು ಆಗಬೇಕಿದೆ. ಎನಿಮಲ್‌ ಬೋರ್ಡ್‌ ಮಾದರಿಯಲ್ಲಿಯೇ ಕ್ರಮ ತೆಗೆದುಕೊಳ್ಳುವುದು ಅನಿವಾರ‍್ಯ ಅನಿಸುತ್ತದೆ.

ಒಂದು ಫೈಟ್‌ ಚಿತ್ರೀಕರಿಸುವಾಗ ಎಂತಹ ದೃಶ್ಯ ಚಿತ್ರೀಕರಿಸಲಾಗುತ್ತಿದೆ, ಅಲ್ಲಿ ಯಾರು ಪಾಲ್ಗೊಳ್ಳುತ್ತಿದ್ದಾರೆ, ತೆಗೆದುಕೊಂಡ ಸುರಕ್ಷತಾ ಕ್ರಮಗಳೇನು? ಅಲ್ಲಿ ಆಂಬ್ಯುಲೆನ್ಸ್‌ ಇದೆಯಾ? ಡಾಕ್ಟರ್‌ ಸ್ಥಳದಲ್ಲಿ ಇರುತ್ತಾರಾ ಹೀಗೆ ಹಲವು ವಿಷಯಗಳನ್ನು ಸಾಹಸ ಕಲಾವಿದರ ಸಂಘಕ್ಕೋ ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೊ ಸಾಹಸ ನಿರ್ದೇಶಕರು ಕೊಡುವಂತೆ ಆಗಬೇಕು. ಸಾಹಸ ಸನ್ನಿವೇಶಗಳ ಚಿತ್ರೀಕರಣ ಆಗುವಾಗ ಸ್ಟಂಟ್‌ ಮಾಸ್ಟರ್‌ ಯೂನಿಯನ್‌ನ ಪ್ರತಿನಿಧಿಯೊಬ್ಬ ಅಲ್ಲಿರಬೇಕು. ಚಿತ್ರತಂಡವು ಬರೆದುಕೊಟ್ಟಂತೆ ಚಿತ್ರೀಕರಣ ಮಾಡುತ್ತಿದೆಯಾ ಅಂತ ಪರಿಶೀಲಿಸಬೇಕು. ಶೂಟಿಂಗ್‌ ನಂತರ ಅವರು ಪ್ರಮಾಣ ಪತ್ರ ಕೊಡಬೇಕು. ಅದು ಇಲ್ಲದೇ ಸೆನ್ಸಾರ್‌ ಆಗದಂತಹ ಕಠಿಣ ಕ್ರಮ ಜಾರಿ ಆಗಬೇಕು.

ಸೆಫ್ಟಿ ಪರಿಕರಗಳು ಇರದೇ ಇದ್ದರೆ ಶೂಟಿಂಗ್‌ ನಿಲ್ಲಿಸುವಂತಹ ಶಕ್ತಿ, ಸಾಹಸ ನಿರ್ದೇಶಕರ ಸಂಘಕ್ಕೆ ಬರುವಂತಾಗಬೇಕು. ಅಲ್ಲದೇ ನಾಯಕರೂ ಅಂತಹ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲ್ಲ ಅನ್ನುವ ಧೈರ್ಯ ತೋರಬೇಕು. ನಿರ್ಮಾಪಕರಿಗೆ ಹಣ ಕೊಡುವುದನ್ನು ಬಿಟ್ಟು ಅವರಿಗೆ ದೃಶ್ಯದ ಬಗ್ಗೆ ಅಂದಾಜಿರುವುದಿಲ್ಲ. ನಿರ್ದೇಶಕರು ಮತ್ತು ಸಾಹಸ ನಿರ್ದೇಶಕರು ಶೂಟಿಂಗ್‌ಗೆ ಏನೆಲ್ಲ ಪರಿಕರಗಳು ಬೇಕು ಅಂತ ಮೊದಲೇ ತಿಳಿಸಬೇಕು. ಅವು ಸಿಕ್ಕ ನಂತರವೇ ಶೂಟಿಂಗ್‌ ಆಗಬೇಕು.

ಸಾಮಾನ್ಯವಾಗಿ ಸಿನಿಮಾ ನಟರ ಮಾತುಗಳನ್ನು ಇಡೀ ಸಿನಿಮಾರಂಗವೇ ಕೇಳುತ್ತದೆ. ಹಾಗಾಗಿ ಅವರೇ ಮುಖ್ಯವಾಹಿನಿಗೆ ಬಂದು ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಅನಿರೀಕ್ಷಿತವಾಗಿ ನಡೆಯುವ ಘಟನೆಯನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ. ಆದರೆ, ನಿರ್ಲಕ್ಷ್ಯಕ್ಕೆ ಬಲಿಯಾಗುವುದು ಇದೆಯಲ್ಲ ಅದು ಮಹಾ ಅಪರಾಧ. ಅದಕ್ಕೊಂದು ಕಾನೂನು ತರಲೇಬೇಕು ಅನ್ನುವ ಅರಿವು ಸಿನಿಮಾರಂಗದಲ್ಲಿ ಮೂಡಿಸಬೇಕು. ಕಾನೂನಿನ ಭಯ ಇಲ್ಲದೇ ಇದ್ದರೆ ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಹಾಗಾಗಿ ಕಾನೂನು ಬರಲೇಬೇಕು. ಎನಿಮಲ್‌ ಬೋರ್ಡ್‌ ಮಾದರಿಯಲ್ಲಿಯೇ ಬೈಲಾ ಆದಾಗ ಮಾತ್ರ ಜೀವ ಉಳಿಯುವುದಕ್ಕೆ ಸಾಧ್ಯ. ಅನಿಲ್‌ ಮತ್ತು ಉದಯ್‌ ನೆನಪಿನಲ್ಲಿ ಇಂತಹ ಕ್ರಮಗಳು ಜಾರಿಗೆ ಬರಲಿ.

ನಿರೂಪಣೆ : ಶರಣು ಹುಲ್ಲೂರು


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ



<script src="https://jsc.adskeeper.com/r/s/rssing.com.1596347.js" async> </script>