Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ದಾರಿ ದೀಪ: ವಿವೇಚನೆ, ಸತ್ಕರ್ಮದಿಂದ ಶಾಂತಿ ಸಿಗುವುದು

$
0
0

* ಹರೀಶ್ ಕಾಶ್ಯಪ್

1 ನನ್ನ ತಾಯಿಗೆ ಬದುಕಿದ್ದಾಗ ನನ್ನಲ್ಲಿ ಪ್ರೀತಿ, ಮಮತೆ ಇರಲಿಲ್ಲ. ಕೆಟ್ಟದ್ದನ್ನೇ ಹರಸುತ್ತಿದ್ದರು. ಈಗ ಅದರ ಬಗ್ಗೆ ಚಿಂತೆ, ಪರಿಹಾರಕ್ಕೆ ತಪವಾಗಿದೆ. ದಾರಿ ತೋರಿ.

-ಸಂದೀಪ್‌, ಕಾರ್ಕಳ

ಹಲವರಿಗೆ ತಮ್ಮ ವ್ಯಕ್ತಿಗತ ಜೀವನದ ದೈಹಿಕ ಅತೃಪ್ತಿ, ಅವಮಾನ, ಹಿಂಸೆಗಳ ಅನುಭವಗಳನ್ನು ಅರಗಿಸಿಕೊಂಡು ಜೀವಿಸಲಾಗದು. ಹಾಗಾಗಿ ಅವರುಕುಟುಂಬ, ನೆಂಟರಿಷ್ಟರು, ವಾಸದ ಮನೆ, ಪಶುಗಳ ಮೇಲೆ ತಮ್ಮ ಆ ಉರಿಯನ್ನು ಕಾರುವರು. ಇದೊಂದು ಮಾನಸಿಕ ಅಸ್ವಸ್ಥ ನಡೆ. ಅದನ್ನು ನೀವು ತೀರಾ ವ್ಯಕ್ತಿಗತವಾಗಿ ನೋಡದೆ, ಹೀಗೆ ವೈಜ್ಞಾನಿಕ ದೃಷ್ಟಿಯಿಂದ ನೋಡಿ. ಅರ್ಧ ಪರಿಹಾರ ತಾನೇ ಆಗುವುದು! ಮಿಕ್ಕಂತೆ ಅವರು ತೀರಿಹೋದ ತಿಥಿಯಂದು ಗೋಕರ್ಣ/ ಉಡುಪಿ/ ಕಾಶೀ- ಗಯಾ ಯಾವುದೇ ಒಂದು ಕ್ಷೇತ್ರದಲ್ಲಿ ವಿಧಿವತ್ತಾಗಿ ತಿಲಹೋಮ, ಶ್ರಾದ್ಧ, ನಾರಾಯಣ ಬಲಿ ಮತ್ತು ಗೋದಾನ ಪೂಜೆ ಒಟ್ಟಿಗೆ ಆಚರಿಸಿ. ಇದರ ಹೊರತಾಗಿ ಸುಮ್ಮನೆ ತಾಯಿ ಶಾಪ, ಆ ಪಾಪ ಪ್ರಲಾಪವೆಂದು ಕೊರಗದಿರಿ. ಕಾಲಕ್ರಮದಲ್ಲಿ ಇಂಥ ವಿವೇಚನೆ, ಸತ್ಕರ್ಮಗಳಿಂದ ತಾನೇ ಶಾಂತಿ ಪಡೆಯುವಿರಿ.

2. ಅನಾರೋಗ್ಯ ಸಮಸ್ಯೆ ಬಹುವಾಗಿ ಕಾಡುತ್ತಿದೆ. ವೆಲ್ಡಿಂಗ್‌ ವ್ಯಾಪಾರ ನಡೆಸುತ್ತಿದ್ದೇನೆ, ಇದರಲ್ಲಿ ನಷ್ಟವಾಗಿದೆ. ಇದಕ್ಕೆ ಪರಿಹಾರ ಹೇಳಿ.

-ಸುಜಾತಾ ಹೇಮಚಂದ್ರ, ಜೆ ಜೆ ನಗರ, ಉಲ್ಲಾಳ

ತಲೆನೋವಿನ ವಿವಿಧ ಸಮಸ್ಯೆಗಳಿಗೆ ಸದ್ಯದ ರಾಹು ದೆಸೆ ಕುಜ ದ್ರಷ್ಟನೂ, ನೀಚ ಗುರುವೂ ಬಾಧಿಸುತ್ತಿರುವರು. ನಿತ್ಯ ಮುಂಜಾನೆ 12 ಆಶನ ಶುದ್ಧವಾಗಿ ಸೂರ್ಯ ನಮಸ್ಕಾರ ಮಾಡಿ, ನಂತರ 12 ಬಾರಿ ಅಶ್ವತ್ಥ ಪ್ರದಕ್ಷಿಣೆ ಮಾಡುತ್ತ ಬನ್ನಿ. ಆಯುರ್ವೇದ ಔಷಧಿ ಉಪಯುಕ್ತ. ಇನ್ನು ನಿಮ್ಮ ಕಬ್ಬಿಣ ಸಂಬಂಧಿ ವ್ಯಾಪಾರ ಮುಂದುವರೆಸಿ, ಹೆಚ್ಚಿನ ಓಡಾಟ, ಪರಿಶ್ರಮದಿಂದ ಮುಂದಿನ ವರ್ಷದಲ್ಲಿ ಲಾಭದತ್ತ ನಡೆಯುವಿರಿ. ಅಂಗಡಿಯಲ್ಲಿ ಶನಿವಾರ ಸಂಜೆ ವಾಸ್ತುರಕ್ಷ ಸಹಿತ ಸುದರ್ಶನ ಹೋಮದಿಂದ ಪ್ರಗತಿಯಾಗುವುದು.

3. ನನ್ನ ಎರಡೂ ಮಕ್ಕಳಿಗೆ ಮಲಗಿದಾಗ ಮೂತ್ರ ಮಾಡಿಕೊಳ್ಳುವ ಸಮಸ್ಯೆ ಕಾಡುತ್ತಿದೆ. ಪರಿಹಾರ ಆಗುವುದೇ?

-ಅಶ್ವಿನೀ, ಬೆಂಗಳೂರು

ಸಮಸ್ಯೆ ಇದ್ದರೆ ಪರಿಹಾರವೂ ಇರುತ್ತದೆ. ಭಾಗ್ಯ ಉತ್ತಮವಿದ್ದರೆ ಬೇಗ, ಇಲ್ಲವಾದರೆ ತಡವಾಗುವುದು. ನೀವು ದಂಪತಿಗಳಿಬ್ಬರಿಗೂ ಶನಿ- ರಾಹು (ಸರ್ಪ) ದೋಷವಿದ್ದು, ಅದು ಕುಟುಂಬ ದೋಷಗಳು. ಉತ್ತಮ ಜ್ಯೋತಿಷಿಯಲ್ಲಿ ವಿಮರ್ಶೆ ನಡೆಸಿ, ವಿಧಿವತ್ತಾದ ಕೆಲ ಪೂಜಾ ಪ್ರಾಯಶ್ಚಿತ್ತಗಳನ್ನು ಮಾಡಿಸಬೇಕು. ಜತೆಗೆ ವೈದ್ಯಕೀಯ ಉಪಚಾರವೂ ಬೇಕು.

4. ಯಾವುದೇ ಪೂಜೆ ಪುನಸ್ಕಾರ ಮಾಡಲು ಆಗುತ್ತಿಲ್ಲ. ವಿವರ ನೀಡಿದ್ದೇನೆ. ದಾರಿ ತೋರಿಸಿ.

-ರಾಜೇಶ್‌, ಚಂದ್ರಾ ಲೇಔಟ್‌

ಶುಭ ಕರ್ಮಗಳ ಮಾಡಲಾಗುತ್ತಿಲ್ಲ ಎಂಬ ಚಿಂತೆಯೂ ಒಂದು ಶುಭಕರ್ಮವೇ ಆಗಿದೆ! ಚಿಂತೆ ಬಿಡಿ, ಪ್ರತಿ ಶನಿವಾರ ಒಪ್ಪತ್ತು ಊಟ ಮಾಡಿ- ಶ್ರೀ ವೆಂಕಟೇಶ್ವರ ದರ್ಶನ - ಪ್ರಾರ್ಥನೆ ಮಾಡುತ್ತ ಇರಿ. ಮಾಂಸಾಹಾರ ತ್ಯಜಿಸಿ, ಮನೆಯವರಿಗೂ ತಿಳಿಹೇಳಿ ಬಿಡಿಸಿ. ನಂತರ ಮನೆಯಲ್ಲಿ ನವಗ್ರಹ ಶಾಂತಿ ಸಹಿತ ಸತ್ಯನಾರಾಯಣ ಪೂಜೆ ಮಾಡಿರಿ. ಒಳಿತಾಗುವುದು.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!