Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

'ದೊಡ್ಮನೆ' ವಿಷಯ ತೆರೆಗೆ ಬಂತು

$
0
0

* ಶರಣು ಹುಲ್ಲೂರು

ಸೂರಿ ನಿರ್ದೇಶನದ ‘ದೊಡ್ಮನೆ ಹುಡ್ಗ’ ಚಿತ್ರವು ನಾನಾ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. ಇದು ಪುನೀತ್ ರಾಜ್‌ಕುಮಾರ್‌ರ 25ನೇ ಸಿನಿಮಾ ಆದ ಕಾರಣ, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಜತೆಗೆ ಹೆಸರಾಂತ ತಾರಾ ಬಳಗ ಕೂಡ ಒಂದಾಗಿದ್ದರಿಂದ ‘ದೊಡ್ಮನೆ’ಯ ಕುತೂಹಲ ಮತ್ತಷ್ಟು ಹೆಚ್ಚಿದೆ.

ಅಜಯ್ ಪಿಕ್ಚರ್ಸ್‌ ಲಾಂಛನದಲ್ಲಿ ತಯಾರಾಗಿರುವ ಚಿತ್ರಕ್ಕೆ ಎಂ.ಗೋವಿಂದು ನಿರ್ಮಾಪಕರು. ಇಂದು (ಸೆ.30) ಚಿತ್ರವು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ತಮ್ಮ ಪಾತ್ರ ಮತ್ತು ಈ ಸಿನಿಮಾ ಪ್ರೇಕ್ಷಕನಿಗೆ ನೀಡುವ ಮನರಂಜನೆ ಕುರಿತು ಪುನೀತ್ ಇಲ್ಲಿ ಹೇಳಿಕೊಂಡಿದ್ದಾರೆ.

‘ದೊಡ್ಮನೆ ಹುಡ್ಗ ಅಂದಾಕ್ಷಣ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುವುದು ನಿಜ. ಅದೆಲ್ಲವನ್ನೂ ಸಿನಿಮಾ ಫುಲ್‌ಫಿಲ್ ಮಾಡಲಿದೆ. ಹೊಸ ಕತೆ, ಮೆಲೋಡಿ ಹಾಡು, ವಿಭಿನ್ನವಾಗಿರುವ ಸಾಹಸ ಸನ್ನಿವೇಶಗಳು ಮತ್ತು ಹಾಡೊಂದರಲ್ಲಿ ಅಭಿಮಾನಿಗಳೂ ಕಾಣಿಸಿಕೊಂಡಿರುವುದರಿಂದ ಎಲ್ಲರಿಗೂ ಈ ಸಿನಿಮಾ ಇಷ್ಟವಾಗಲಿದೆ. ಅಲ್ಲದೇ ನಿರ್ದೇಶಕ ಸೂರಿ ಜತೆಗೆ ಇದು ನನ್ನ ಮೂರನೇ ಸಿನಿಮಾ. ಎರಡೂ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಇದನ್ನೂ ಆಸ್ವಾದಿಸುತ್ತಾರೆ ಎಂಬ ನಂಬಿಕೆ ಇದೆ’ ಅಂತಾರೆ ಪುನೀತ್.

ಚಿತ್ರದ ಮತ್ತೊಂದು ವಿಶೇಷ ಅಂದರೆ ತಾರಾಗಣ. ಅಂಬರೀಷ್, ಸುಮಲತಾ, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ರಂಗಾಯಣ ರಘು, ರವಿಶಂಕರ್ ಹೀಗೆ ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿ ಇದ್ದಾರೆ. ಎಲ್ಲರಿಗೂ ಅವರದ್ದೇ ಆದ ಅಭಿಮಾನಿ ಬಳಗವಿರುವ ಕಾರಣ, ಇದು ಎಲ್ಲರೂ ಮೆಚ್ಚುವಂಥ ಸಿನಿಮಾ ಆಗಲಿದೆಯಂತೆ. ಚಿತ್ರದ ಕತೆಯೂ ವಿಭಿನ್ನ. ಶ್ರೀಮಂತ ಕುಟುಂಬದಲ್ಲಿ ಬೆಳೆದ ನಾಯಕ, ಸಮಾಜದ ಒಳಿತಿಗೆ ಏನೆಲ್ಲ ಮಾಡುತ್ತಾನೆ ಎಂಬುದು ಚಿತ್ರದ ತಿರುಳು. ಅಂತಹ ಜವಾಬ್ದಾರಿ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಫೇಮಸ್ ಆಗಿವೆ. ‘ಅಭಿಮಾನಿ..’ ಎಂಬ ಹಾಡೊಂದನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೂಟ್ ಮಾಡಿದ್ದಾರೆ ನಿರ್ದೇಶಕರು. ಅಲ್ಲದೇ ರವಿವರ್ಮ, ಡಿಫರೆಂಟ್ ಡ್ಯಾನಿಯಂಥ ಸಾಹಸ ನಿರ್ದೇಶಕರು ಹೊಸ ರೀತಿಯಲ್ಲಿ ಸ್ಟಂಟ್ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಇವೆಲ್ಲ ಕಾರಣದಿಂದಾಗಿ ಸಿನಿಮಾ ಇಷ್ಟವಾಗಲಿದೆಯಂತೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಎಡಗೈ ಬಳಕೆದಾರರ ದಿನದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>