Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ರಸ್ತೆ ಬದಿ ದೋಸೆ, ವಡಾಪಾವ್‌ ಅಂಗಡಿಗಳ ಮೇಲೆ ಐಟಿ ದಾಳಿ

$
0
0

* ಆದಾಯ ತೆರಿಗೆ ಇಲಾಖೆಯ ಕಾರ್ಯಚರಣೆ

* ಕಪ್ಪುಹಣ ಘೋಷಣೆ ಯೋಜನೆ ಯಶಸ್ಸಿಗೆ ಕಸರತ್ತು

ಮುಂಬಯಿ: ಆದಾಯ ತೆರಿಗೆ ಇಲಾಖೆಯು ಕಪ್ಪು ಹಣ ಘೋಷಣೆಗೆ ಜಾರಿಗೊಳಿಸಿರುವ ವಿಶೇಷ ಯೋಜನೆಯ ಗಡುವು ಮುಕ್ತಾಯಕ್ಕೆ 10 ದಿನ ಬಾಕಿ ಇರುವಂತೆಯೇ, ಯೋಜನೆಯನ್ನು ಯಶಸ್ವಿಗೊಳಿಸಲು ಕಸರತ್ತು ನಡೆಸುತ್ತಿದೆ. ಇದರ ಪರಿಣಾಮ ದೇಶದ ನಾನಾ ನಗರಗಳಲ್ಲಿ ರಸ್ತೆ ಬದಿಯಲ್ಲಿನ ದೋಸೆ, ವಡಾಪಾವ್‌ ಮುಂತಾದವುಗಳನ್ನು ಮಾರುವ ಸಣ್ಣ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಮುಂಬಯಿನಲ್ಲಿ 50ಕ್ಕೂ ಹೆಚ್ಚು ವಡಾ ಪಾವ್‌ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಘಾಟ್ಕೋಪರ್‌ನಲ್ಲಿ ದೋಸೆ ಸೆಂಟರ್‌ ಗುರಿಯಾಗಿದೆ. ಅಹಮದಾಬಾದ್‌, ಹೊಸದಿಲ್ಲಿ, ಕೋಲ್ಕೊತಾದಲ್ಲೂ ಸುಮಾರು 100 ಕಡೆಗಳಲ್ಲಿ ಸಮೀಕ್ಷೆ, ದಾಳಿಗಳು ನಡೆದಿವೆ.

ಕಳೆದ 6 ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಯು ಸಮೀಕ್ಷೆಗಳನ್ನು ನಡೆಸಿತ್ತು. ಇದರ ಪ್ರಕಾರ ಸುಮಾರು 1 ಲಕ್ಷ ಮಂದಿ ಸಣ್ಣ ವ್ಯಾಪಾರಿಗಳು ಮತ್ತು ವರ್ತಕರು ತೆರಿಗೆ ತಪ್ಪಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದೊಂದು ವಾರದಿಂದ ಸಮೀಕ್ಷೆ ತೀವ್ರಗತಿಯಲ್ಲಿ ಸಾಗಿದೆ.

'' ನನ್ನ ಕಳೆದ 25 ವರ್ಷಗಳ ಅನುಭವದಲ್ಲಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ, ದಾಳಿಗಳನ್ನು ಕಂಡಿಲ್ಲ. ಇದುವರೆಗೆ ತೆರಿಗೆ ಅಧಿಕಾರಿಗಳನ್ನು ಕಂಡೂ ಇಲ್ಲದ ವ್ಯಾಪಾರಿಗಳಿಗೆ ಅಚ್ಚರಿಯಾಗಿತ್ತು'' ಎನ್ನುತ್ತಾರೆ ಲೆಕ್ಕ ಪರಿಶೋಧಕರೊಬ್ಬರು. ಸೆಪ್ಟೆಂಬರ್‌ 30ರೊಳಗೆ ಇಂಥ 1000 ಸಣ್ಣ ದಾಳಿಗಳು ನಡೆಯುವ ನಿರೀಕ್ಷೆ ಇದೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ



<script src="https://jsc.adskeeper.com/r/s/rssing.com.1596347.js" async> </script>