Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸಂತೆಗೆ ಬಂದ ಕಬೀರ

$
0
0

ಇಂದ್ರಬಾಬು ನಿರ್ದೇಶನದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವರಾಜ್‌ ಕುಮಾರ್‌ ಇಲ್ಲಿ ತುಂಬ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರಿಂದ ಸಿನಿಮಾ ಒಂದಿಷ್ಟು ಕುತೂಹಲ ಮೂಡಿಸಿದೆ.

- ಪದ್ಮಾ ಶಿವಮೊಗ್ಗ

ಬದುಕಿನ ಪ್ರೀತಿ, ರೀತಿ, ನೀತಿಗಳನ್ನು ಹೇಳಿದ ಸಂತ ಕಬೀರ ಎಂದೆಂದಿಗೂ ಪ್ರಸ್ತುತರೆ. ಅವರ ಜೀವನ ಚರಿತ್ರೆಯನ್ನು ತೆರೆಗೆ ತರುವ ಯತ್ನ ಮಾಡಿದ್ದಾರೆ ನಿರ್ದೇಶಕ ಇಂದ್ರಬಾಬು. ಇದರಲ್ಲಿ ಶಿವರಾಜ್‌ ಕುಮಾರ್‌, ಕಬೀರನಾಗಿ ಕಾಣಿಸಿಕೊಂಡಿದ್ದರಿಂದ ಚಿತ್ರ ಹೇಗೆ ಮೂಡಿಬಂದಿರಬಹುದೆಂಬ ಕುತೂಹವಂತೂ ಸಹಜ. ಈ ಚಿತ್ರ ಇಂದು (ಜು.29) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಸುಬ್ರಹ್ಮಣ್ಯ ಪ್ರಸೆಂಟೇಷನ್‌ ಬ್ಯಾನರ್‌ನಡಿ ಕುಮಾರಸ್ವಾಮಿ ಪತ್ತಿಕೊಂಡ ನಿರ್ಮಾಣ ಮಾಡಿದ ಚಿತ್ರವಿದು. 'ಇವತ್ತಿಗೂ ಕಬೀರ ಪ್ರಸ್ತುತ ಅನ್ನಿಸಿತು. ಹಾಗಾಗಿ ಈ ಸಿನಿಮಾ ಮಾಡಲು ನಿರ್ಧರಿಸಿದೆವು. ಈ ಪಾತ್ರ ಶಿವಣ್ಣರಿಗೆ ತುಂಬಾ ಹತ್ತಿರವಾದುದು. ಅವರಿಂದ ಮಾತ್ರ ಈ ಪಾತ್ರ ಮಾಡೋಕೆ ಸಾಧ್ಯ' ಎನ್ನುತ್ತಾರೆ ನಿರ್ದೇಶಕ ಇಂದ್ರಬಾಬು.

ಕಬೀರ ದೋಹಾಗಳು ಸಿನಿಮಾದ ಹೈಲೈಟ್‌. ರಾಜ, ಧರ್ಮ ಮತ್ತು ಕಬೀರರ ನಡುವಿನ ಸಂಘರ್ಷ ಚಿತ್ರದಲ್ಲಿದೆ. ಕಬೀರರೊಳಗಿದ್ದ ಕಿಚ್ಚು, ಛಲ ಮತ್ತು ಸಾಮರಸ್ಯ ಗುಣವನ್ನು ಚಿತ್ರ ಹೇಳಲಿದೆ.

ಕನ್ನಡದಲ್ಲಿ ಕಬೀರರನ್ನು ಕುರಿತ ಎರಡು ಚಿತ್ರಗಳು ಈಗಾಗಲೇ ಬಂದಿವೆ. 1948ರಲ್ಲಿ ಸಂತ ಕಬೀರ ಮತ್ತು 1962ರಲ್ಲಿ ಮಹಾತ್ಮ ಕಬೀರ ಚಿತ್ರ ತೆರೆಗೆ ಬಂದಿದ್ದವು. ಆದರೆ, ಶಿವರಾಜ್‌ ಕುಮಾರ್‌ ಅಭಿನಯದ 'ಸಂತೆಯಲ್ಲಿ ನಿಂತ ಕಬೀರ' ಇವೆಲ್ಲಕ್ಕಿಂತಲೂ ಭಿನ್ನವಾಗಿದೆ. ಹಲವು ಭಾಷೆಗಳಲ್ಲಿ ರಂಗ ಪ್ರಯೋಗ ಕಂಡ, ಖ್ಯಾತ ಹಿಂದಿ ಸಾಹಿತಿ ಭೀಷ್ಮ ಸಹಾನಿ ಬರೆದ ಪ್ರಸಿದ್ಧ ನಾಟಕ 'ಕಬೀರ ಖಡಾ ಬಾಜಾರ್‌ ಮೆ' ಎಂಬ ಕೃತಿಯನ್ನಾಧರಿಸಿ ಚಿತ್ರ ಮಾಡಲಾಗಿದೆ. ಎರಡು ಧರ್ಮಗಳ ನಡುವೆ ಸಾಮರಸ್ಯ ಸಾರುವ ಕಬೀರರನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಪ್ರೇಮ, ಅಮ್ಮ-ಮಗನ ಸೆಂಟಿಮೆಂಟ್‌, ದೇಶ ಪ್ರೇಮ, ಸುಲ್ತಾನ ಮತ್ತು ಕಬೀರರ ನಡುವಿನ ಸಂಘರ್ಷ ಎಲ್ಲವೂ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ.

ಸನುಷಾ ನಾಯಕಿಯಾಗಿ ನಟಿಸಿದ್ದು, ಜನಪ್ರಿಯ ನಟರಾದ ಶರತ್‌ ಕುಮಾರ್‌, ಅನಂತ್‌ನಾಗ್‌, ಭಾಗೀರಥಿ ಬಾಯಿ ಕದಂ, ಶರತ್‌ ಲೋಹಿತಾಶ್ವ ನಟಿಸಿರುವುದು ಇನ್ನೊಂದು ವಿಶೇಷ. ಬಾಲಿವುಡ್‌ ಮ್ಯೂಸಿಕ್‌ ಡೈರೆಕ್ಟರ್‌ ಇಸ್ಮಾಯಿಲ್‌ ದರ್ಬಾರ್‌ ಸಂಗೀತವಿದೆ. ಗೋಪಾಲ ವಾಜಪೇಯಿ ಸಾಹಿತ್ಯವಿದ್ದು, ಚಿತ್ರದ ಕತೆ ವಿಶಿಷ್ಟವಾಗಿದೆ. ನವೀನ್‌ ಕುಮಾರ್‌ರ ಕ್ಯಾಮೆರಾ ಕೈಚಳಕವಿದೆ. ಸೋನು ನಿಗಮ್‌, ರಾಮಚಂದ್ರ ಹಡಪದ್‌, ಜಾವೇದ್‌ ಆಲಿ ಮತ್ತಿತರರು ಹಾಡಿರುವ ಹಾಡುಗಳ ಮೇಕಿಂಗ್‌ ಎಲ್ಲರ ಮೆಚ್ಚುಗೆ ಗಳಿಸಿದೆ.

ಗುರು ರಮಾನಂದರ ಪಾತ್ರದಲ್ಲಿ ಅನಂತ್‌ನಾಗ್‌, ನೃತ್ಯಗಾರ್ತಿಯಾಗಿ ಸಂಜನಾ, ತಾಯಿಯಾಗಿ ಭಾಗೀರಥಿ ಬಾಯಿ ಕದಂ ಕಾಣಿಸಿಕೊಂಡಿದ್ದಾರೆ. ವೈಶಾಲಿ ದೀಪಕ್‌ ಕೂಡ ಇಲ್ಲಿ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ನಟಿಸಿದ್ದಾರೆ.

ಕೆಆರ್‌ಎಸ್‌ ಹಿನ್ನೀರಿನ ಸುಂದರ ಪ್ರದೇಶದಲ್ಲಿ ಸೆಟ್‌ ಹಾಕಿ ಕಾಶಿಯನ್ನು ಮರು ಸೃಷ್ಟಿಸಲಾಗಿದೆ. 40 ಬಡಗಿಗಳು, 50 ಕಾರ್ಮಿಕರು ನಾಲ್ಕು ತಿಂಗಳು ಸೆಟ್‌ ನಿರ್ಮಾಣ ಮಾಡಿದ್ದಾರೆ. ಮೈಸೂರು ಅರಮನೆ ಒಳಭಾಗದಲ್ಲಿ, ಕೇರಳ, ಶ್ರೀರಂಗಪಟ್ಟಣ, ಚಿಕ್ಕಮಗಳೂರುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

---

ಕಮರ್ಷಿಯಲ್‌ ಎಲಿಮೆಂಟ್ಸ್‌ ಇರುವ ಕ್ಲಾಸಿಕಲ್‌ ಚಿತ್ರ ಇದು. ಕಬೀರರ ಪಾತ್ರದಲ್ಲಿ ಶಿವಣ್ಣರ ಮೌನ ಬಹಳ ಕಾಡುತ್ತದೆ. ಅವರು ಮನೋಜ್ಞವಾಗಿ ನಟಿಸಿದ್ದಾರೆ.

- ಇಂದ್ರಬಾಬು, ನಿರ್ದೇಶಕ


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!