Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

'ಕಿಲಾಡಿ' ಕೃಷ್ಣ, 'ತರ್ಲೆ' ರುಕ್ಕು

$
0
0

* ಶರಣು ಹುಲ್ಲೂರು
ಅಜಯ್ ರಾವ್‌ಗೂ ಮತ್ತು ಕೃಷ್ಣನಿಗೂ ಗೆಲುವಿನ ನಂಟಿದೆ. ಹೀಗಾಗಿಯೇ ಕೃಷ್ಣನ ಹೆಸರಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಅಜಯ್. ಬಹುತೇಕ ಚಿತ್ರಗಳು ಹಿಟ್ ಕೂಡ ಆಗಿವೆ. ಹೀಗಾಗಿ ಈ ವಾರ ರಿಲೀಸ್ ಆಗುತ್ತಿರುವ ಕೃಷ್ಣ - ರುಕ್ಕು ಕೂಡ ಇವರಿಗೆ ಗೆಲುವು ತಂದು ಕೊಡುವ ನಿರೀಕ್ಷೆ ಇದೆ.

ಇದೇ ಮೊದಲ ಬಾರಿಗೆ ಅಜಯ್ ಯುವ ರೈತನಾಗಿ ಕಾಣಿಸಿಕೊಂಡಿದ್ದು, ಅಮೂಲ್ಯ ನಾಯಕಿ. ದಿಲ್‌ವಾಲೆ ಖ್ಯಾತಿಯ ಅನಿಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ನಿರ್ದೇಶಕರ ಮೂರನೇ ಸಿನಿಮಾ.

ಚಿತ್ರದ ಕತೆಯೇ ವಿಭಿನ್ನವಾಗಿದೆ. ಕೃಷ್ಣ, ರುಕ್ಕುಗಾಗಿ ಪಕ್ಕಾ ರಿಯಲಿಸ್ಟಿಕ್ ಕತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿಕ್ಕವನಿದ್ದಾಗ ಎಲ್ಲರಿಂದ ಬೈಸಿಕೊಂಡ ಹುಡುಗ ಮುಂದೆ ಅವನು ಏನಾಗುತ್ತಾನೆ ಅನ್ನುವ ರೋಚಕ ಸ್ಟೋರಿ ಇಲ್ಲಿದೆ. ಹೀಗಾಗಿ ಕುಟುಂಬದವರೆಲ್ಲಾ ಯಾವುದೇ ಮುಜುಗರ ಇಲ್ಲದೆ ಈ ಚಿತ್ರವನ್ನು ನೋಡಬಹುದು ಎನ್ನುತ್ತಾರೆ ನಿರ್ದೇಶಕ.

ಚಿತ್ರದಲ್ಲಿ ಹಲವು ವಿಶೇಷಗಳಿವೆ. ಇದುವರೆಗೆ ಚಿಕ್ಕಮಗಳೂರಿನಲ್ಲಿ ಯಾರೂ ತೆರೆಯ ಮೇಲೆ ತೋರಿಸದ ಸ್ಥಳಗಳಲ್ಲಿ ಶೂಟ್ ಮಾಡಿದ್ದಾರೆ ಸಿನಿಮಾಟೋಗ್ರಾಫರ್ ವಾಲಿ. ಹೊಸ ಚಿಕ್ಕಮಗಳೂರನ್ನು ಈ ಚಿತ್ರದಲ್ಲಿ ನೋಡಬಹುದು.

ಉದಯ ಮೆಹ್ತಾ ನಿರ್ಮಾಣದ ಈ ಚಿತ್ರವು 180 ಥಿಯೇಟರ್‌ನಲ್ಲಿ ಈ ವಾರ ಬಿಡುಗಡೆ ಆಗುತ್ತಿದೆ. ಕತೆಯೇ ಹೆಚ್ಚು ಇಂಪ್ರೆಸ್ ಮಾಡಿದ್ದರಿಂದ ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ ನಿರ್ಮಾಪಕರು.

ಅಜಯ್ ಯುವ ರೈತನ ಪಾತ್ರದಲ್ಲಿ ಮಿಂಚಿದ್ದರೆ, ತಮಗೆ ತಾವೇ ಬಿಲ್ಡ್‌ಅಪ್ ಕೊಡುವ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಕುರಿತು ಅವರು ಹೇಳುವುದು ಹೀಗೆ, 'ಇಲ್ಲಿ ನನ್ನದು ವಿಭಿನ್ನ ಪಾತ್ರ. ಈವರೆಗೂ ಮಾಡದೇ ಇರುವ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಈ ಜಗತ್ತಿನಲ್ಲಿ ನಾನೇ ಸುಂದರಿ. ಅಲ್ಲದೇ ನನ್ನಷ್ಟು ಬುದ್ಧಿವಂತರು ಮತ್ತ್ಯಾರೂ ಇಲ್ಲ. ನಾನೇ ಗ್ರೇಟ್ ಅನ್ನುವ ಹುಡುಗಿ. ಹೀಗಾಗಿ ನಾಯಕನ ಜತೆ ಯಾವಾಗಲೂ ತರ‌್ಲೆ ಮಾಡ್ತಾ ಇರುತ್ತೇನೆ. ಸಖತ್ ಖುಷಿಯಾಗಿದ್ದವಳ ಜೀವನದಲ್ಲಿ ಆಕಸ್ಮಿಕವಾಗಿ ತಿರುವೊಂದು ಸಿಗುತ್ತದೆ. ಅಲ್ಲಿಂದ ನನ್ನ ಪಾತ್ರ ಮತ್ತೊಂದು ದಿಕ್ಕಿನತ್ತ ಸಾಗುತ್ತದೆ' ಅಂತಾರೆ.

ಶ್ರೀಧರ್ ಸಂಭ್ರಮ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ಕತೆಯಲ್ಲೆ ಹಾಡುಗಳು ಮಿಕ್ಸ್ ಆಗಿವೆ. ಚಿತ್ರಕ್ಕಾಗಿ ನಾಲ್ಕು ಹಾಡುಗಳನ್ನು ಕಂಪೋಸ್ ಮಾಡಿದ್ದರೂ, ಮೂರನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ಉದಯ್‌ ಕೆ. ಮೆಹ್ತಾ ನಿರ್ಮಾಣದ ಕೃಷ್ಣ -ರುಕ್ಕು ಇಂದು ಬಿಡುಗಡೆ


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>