ಆದರೆ, ಇತ್ತೀಚಿನ ದಿನಗಳಲ್ಲಿ ಈ ಜಗನ್ನಾಥ ಭಕ್ತರ ಲಿಖಿತ ಕೋರಿಕೆ ಸ್ವೀಕರಿಸುವ ದೇವನಾಗಿ ಜನಪ್ರಿಯನಾಗಿದ್ದಾನೆ. ಕೆಲಸ, ಪ್ರೀತಿ, ಮದುವೆ ಹೀಗೆ ಭಕ್ತರು ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕಿ ಕೈ ಮುಗಿಯುತ್ತಾರೆ.
'ಕಾಣಿಕೆ ಹುಂಡಿಯಲ್ಲಿ ಹೆಚ್ಚಾಗಿ ಭಕ್ತರ ಕೋರಿಕೆ ಪತ್ರಗಳೇ ತುಂಬಿರುತ್ತವೆ. ಉದ್ಯೋಗಾಕಾಂಕ್ಷಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆದವರು ಅಷ್ಟೇ ಏಕೆ ಪ್ರೇಮಿಗಳು ಪತ್ರ ಬರೆದು, ತಮ್ಮ ಆಯ್ಕೆ ಸರಿ ಇದೆಯೇ ಎಂದು ದೇವರಲ್ಲಿ ಪ್ರಶ್ನೆ ಇಡುತ್ತಾರೆ. ಕೆಲವರು ತಮ್ಮ ವಿವಾಹದ ಆಮಂತ್ರಣ ಪತ್ರವನ್ನು ಹಾಕಿ, ವೈವಾಹಿಕ ಜೀವನ ಚೆನ್ನಾಗಿಡು ಎಂದು ಪ್ರಾರ್ಥಿಸುತ್ತಾರೆ,'ಎಂದು ದೇಗುಲದ ಟ್ರಸ್ಟಿ ಮಹೇಂದ್ರ ಝಾ ಹೇಳುತ್ತಾರೆ.
ತಿಂಗಳಿಗೊಮ್ಮೆ ತೆರೆಯಲಾಗುವ ಜಗನ್ನಾಥ ಮಂದಿರದ ಕಾಣಿಕೆ ಹುಂಡಿಯಲ್ಲಿ ದುಃಖದ ಪತ್ರಗಳು ಇರುತ್ತವಂತೆ. ಕೆಲವು ಆಸಕ್ತಿದಾಯಕ ಪತ್ರಗಳು ಹುಂಡಿ ಸೇರುತ್ತವೆ. ಅಂಥ ಒಂದು ಪತ್ರದಲ್ಲಿ 'ದೇವರೆ, ತಂದೆ ತಾಯಿ ಜತೆ ಒಟ್ಟಾಗಿ ಬಾಳುತ್ತಿದ್ದೇವೆ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ಕಷ್ಟದ ಸಮಯದಲ್ಲಿ ನಮ್ಮ ಕೈ ಬಿಡಬೇಡ,' ಎಂದು ಮಕ್ಕಳು ಬೇಡಿಕೊಂಡಿದ್ದರು ಝಾ ವಿವರಿಸುತ್ತಾರೆ.
ಅಹಮದಾಬಾದ್: ಒಡಿಶಾದ ಪುರಿ ಜಗನ್ನಾಥನ ನಂತರ ಅಹಮದಾಬಾದ್ನ ಜಗನ್ನಾಥ ಮಂದಿರದ ರಥಯಾತ್ರೆ ಜಗತ್ಪ್ರಸಿದ್ಧ.