Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಭಕ್ತರ ಲಿಖಿತ ಕೋರಿಕೆ ಸ್ವೀಕರಿಸುವ ಜಗನ್ನಾಥ

$
0
0

ಅಹಮದಾಬಾದ್: ಒಡಿಶಾದ ಪುರಿ ಜಗನ್ನಾಥನ ನಂತರ ಅಹಮದಾಬಾದ್‌ನ ಜಗನ್ನಾಥ ಮಂದಿರದ ರಥಯಾತ್ರೆ ಜಗತ್ಪ್ರಸಿದ್ಧ.

ಆದರೆ, ಇತ್ತೀಚಿನ ದಿನಗಳಲ್ಲಿ ಈ ಜಗನ್ನಾಥ ಭಕ್ತರ ಲಿಖಿತ ಕೋರಿಕೆ ಸ್ವೀಕರಿಸುವ ದೇವನಾಗಿ ಜನಪ್ರಿಯನಾಗಿದ್ದಾನೆ. ಕೆಲಸ, ಪ್ರೀತಿ, ಮದುವೆ ಹೀಗೆ ಭಕ್ತರು ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕಿ ಕೈ ಮುಗಿಯುತ್ತಾರೆ.

'ಕಾಣಿಕೆ ಹುಂಡಿಯಲ್ಲಿ ಹೆಚ್ಚಾಗಿ ಭಕ್ತರ ಕೋರಿಕೆ ಪತ್ರಗಳೇ ತುಂಬಿರುತ್ತವೆ. ಉದ್ಯೋಗಾಕಾಂಕ್ಷಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆದವರು ಅಷ್ಟೇ ಏಕೆ ಪ್ರೇಮಿಗಳು ಪತ್ರ ಬರೆದು, ತಮ್ಮ ಆಯ್ಕೆ ಸರಿ ಇದೆಯೇ ಎಂದು ದೇವರಲ್ಲಿ ಪ್ರಶ್ನೆ ಇಡುತ್ತಾರೆ. ಕೆಲವರು ತಮ್ಮ ವಿವಾಹದ ಆಮಂತ್ರಣ ಪತ್ರವನ್ನು ಹಾಕಿ, ವೈವಾಹಿಕ ಜೀವನ ಚೆನ್ನಾಗಿಡು ಎಂದು ಪ್ರಾರ್ಥಿಸುತ್ತಾರೆ,'ಎಂದು ದೇಗುಲದ ಟ್ರಸ್ಟಿ ಮಹೇಂದ್ರ ಝಾ ಹೇಳುತ್ತಾರೆ.

ತಿಂಗಳಿಗೊಮ್ಮೆ ತೆರೆಯಲಾಗುವ ಜಗನ್ನಾಥ ಮಂದಿರದ ಕಾಣಿಕೆ ಹುಂಡಿಯಲ್ಲಿ ದುಃಖದ ಪತ್ರಗಳು ಇರುತ್ತವಂತೆ. ಕೆಲವು ಆಸಕ್ತಿದಾಯಕ ಪತ್ರಗಳು ಹುಂಡಿ ಸೇರುತ್ತವೆ. ಅಂಥ ಒಂದು ಪತ್ರದಲ್ಲಿ 'ದೇವರೆ, ತಂದೆ ತಾಯಿ ಜತೆ ಒಟ್ಟಾಗಿ ಬಾಳುತ್ತಿದ್ದೇವೆ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ಕಷ್ಟದ ಸಮಯದಲ್ಲಿ ನಮ್ಮ ಕೈ ಬಿಡಬೇಡ,' ಎಂದು ಮಕ್ಕಳು ಬೇಡಿಕೊಂಡಿದ್ದರು ಝಾ ವಿವರಿಸುತ್ತಾರೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>