Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸುಂದರ ಸುರಂಗ ಮಾರ್ಗ!

$
0
0

ಅಭಿಷೇಕ್‌ ಎಂ. ಎಸ್‌ ಕುದೂರು

ಕುದೂರು ಹೋಬಳಿಯ ಮರೂರು ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಹಾಸನ ನಡುವಿನ ರೈಲು ಮಾರ್ಗದಲ್ಲಿನ 600 ಮೀ. ಉದ್ದದ ಸುರಂಗ ಮಾರ್ಗ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲು ಸಿದ್ಧವಾಗಿದೆ.

150 ಜನರ ತಂಡ ಹಗಲಿರುಳೆನ್ನದೆ ಸತತ ಎರಡು ವರ್ಷಗಳ ಕಾಲ ಸುರಂಗವನ್ನು ಕೊರೆದು ಪ್ರಯಾಣಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಿದ್ದಾರೆ. 600 ಮೀ. ಉದ್ದ ಸುರಂಗದಲ್ಲಿ ಕೆಲವು ಸಣ್ಣಪುಟ್ಟ ಕಾರ್ಯಗಳಷ್ಟೇ ಬಾಕಿಯಿವೆ. ಅಧಿಕಾರಿಯೊಬ್ಬರು ಹೇಳುವಂತೆ ಮಾರ್ಚ್‌ 2018ರ ವೇಳೆಗೆ ಸುರಂಗ ಸಂಪೂರ್ಣ ಸಿದ್ಧಗೊಳ್ಳಲಿದ್ದು, ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಪ್ರಯಾಣಿಕರ ರೈಲು ಸಂಚರಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿ ಸುರಂಗ ನಿರ್ಮಿಸಿದ್ದು, ತೀಕ್ಷ ್ಮವಾದ ಬಂಡೆಗಳನ್ನು ಕೊರೆದು ಅದಕ್ಕೆ ಸೂಕ್ತ ಆಕಾರ ನೀಡಿ ಮೇಲ್ಛಾವಣಿ ಕಳಚದಂತೆ ಸಿಮೆಂಟ್‌ ಹೊದಿಕೆ ಹಾಕಲಾಗಿದೆ.

ರೈಲು ಹಳಿ ಹಾದು ಹೋಗಿರುವ ಕುದೂರು ಹೋಬಳಿಯ ಮರೂರು ಬಳಿಯಲ್ಲಿ ಸುಮಾರು 25 ಅಡಿಗಳಷ್ಟು ಆಳಕ್ಕೆ ಭೂಮಿಯನ್ನು ಅಗೆಯಬೇಕಾದ ಅನಿವಾರ್ಯವಿತ್ತು. ಒಂದು ವೇಳೆ ಭೂಮಿ ಅಗೆದರೂ ಈ ಜಾಗದಲ್ಲಿ ಬೆಟ್ಟ ಹಾಗೂ ಭೂಮಿಯ ಅಳದಲ್ಲಿರುವ ಕಲ್ಲು ಬಂಡೆಗಳು ಬಹಳ ಗಡುಸಾಗಿವೆ. ಸ್ಫೋಟಕಗಳನ್ನು ಬಳಸಿ ತೆಗೆಯಲು ಯತ್ನಿಸಿದರೆ ಸ್ಥಳೀಯ ವಾಗಿ ತೊಂದರೆಯಾಗಬಹುದು. ಅಲ್ಲದೆ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುವ ಸಮಸ್ಯೆಯನ್ನು ಮನಗಂಡ ರೈಲ್ವೆ ಇಲಾಖೆ ಈ ಜಾಗದಲ್ಲಿ 600 ಮೀ. ಉದ್ದದ ಸುರಂಗ ನಿರ್ಮಿಸಲು ತಿರ್ಮಾನಿಸಿತು.

- 40ಕೋಟಿ ವೆಚ್ಚ -

ಈ ಸುರಂಗ ಮಾರ್ಗ ಹಾಗೂ ನಾರಸಂದ್ರ ಬಳಿಯ ಮಣ್ಣಿನ ದಿಬ್ಬದ ಮೇಲಿನ ಹಳಿ ನಿರ್ಮಾಣವನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಉತ್ತರ ಪ್ರದೇಶ, ಬಿಹಾರ, ಜಾರ್ಖಾಂಡ್‌ ಭಾಗದ ಕಾರ್ಮಿಕರು ಹಗಲಿರುಳು ದುಡಿದಿದ್ದಾರೆ.

- ಸುರಕ್ಷ ತೆಗೆ ಒತ್ತು -

ಸುರಂಗವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಗಡುಸಾದ ಬಂಡೆಗಳನ್ನು ಕೊರೆದು ಸುರಕ್ಷ ತೆಯ ಹಿತದೃಷ್ಟಿಯಿಂದ ಸಿಮೆಂಟ್‌ನಿಂದ ಹೊದಿಕೆ ಹಾಕಿ ಸುಂದರ ಆಕಾರ ನೀಡಲಾಗಿದೆ. ಅಲ್ಲದೆ ಸುರಂಗದ ಅಕ್ಕಪಕ್ಕ ಭೂಮಿಯನ್ನು ತೋಡಿ ಹಳಿ ನಿರ್ಮಾಣ ಮಾಡಲಾಗಿದೆ. ಹಳಿಯ ಅಕ್ಕಪಕ್ಕ ಬಂಡಿಗಳು ಗಡುಸಿಲ್ಲದ ಕಾರಣ ಅದರ ಪಕ್ಕದಲ್ಲಿ ಸಿಮೆಂಟ್‌ ಮೆಟ್ಟಿಲುಗಳನ್ನು ಕೂಡ ನಿರ್ಮಿಸಲಾಗಿದೆ.

- ವಿಶೇಷ ಅನುಭವ -

ಕರ್ನಾಟಕದಲ್ಲಿ ಬೆಂಗಳೂರು ಮಂಗಳೂರು ಮಾರ್ಗದಲ್ಲಿ ಹೆಚ್ಚಾಗಿ ಸುರಂಗ ಮಾರ್ಗಗಳನ್ನು ಕೊರೆಯಲಾಗಿದ್ದು, ಈ ಸುರಂಗ ಮಾರ್ಗಗಳೇ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರಯಾಣಿಕರು ಈ ಹಗಲಿನಲ್ಲೇ ಸಂಚರಿಸುವುದು ಹೆಚ್ಚು ಏಕೆಂದರೆ ಈ ಸುರಂಗ ಮಾರ್ಗದಲ್ಲಿ ರೈಲು ಸಂಚರಿಸುವಾಗ ಉಂಟಾಗುವ ಕತ್ತಲು ಬೆಳಕಿನಾಟದ ವಿಶೇಷ ಅನುಭವ ಮನಸ್ಸಿಗೆ ಮುದ ನೀಡುತ್ತದೆ. ಅಂತೆಯೇ ಕುದೂರು ಬಳಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗ ಕೂಡ ಪ್ರಯಾಣಿಕರ ಕುತೂಹಲ ಹೆಚ್ಚಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸುರಂಗ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ. ಈ ಸುರಂಗ ಮಾರ್ಗ ನೋಡಲು ನಿತ್ಯ ಅನೇಕ ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>