Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಮಂತ್ರಸ್ನಾನ

$
0
0

ಶ್ರೀ ಶ್ರೀ ರವಿಶಂಕರ್‌

ನೋಡಿ, ಈಗ ನಾವೆಲ್ಲರೂ ''ಓಂ ನಮಃ ಶಿವಾಯ, ರಾಧೆಗೋವಿಂದ'' ಎಂದು ಹಾಡುತ್ತೇವೆ. ಇದರ ಅರ್ಥ ಸತ್ಸಂಗದಲ್ಲಿ ಕುಳಿತಿರುವ ಬಹಳ ಜನರಿಗೆ ಗೊತ್ತಿರುವುದಿಲ್ಲ. ಆದರೂ ಎಲ್ಲರಿಗೂ ಯಾವುದೋ ಒಂದರ ಅನುಭವವಾಗುತ್ತದೆ. ಅಲ್ಲವೆ? ನಾವು ಹಾಡಿದಾಗ, ಅದರ ಪರಿಣಾಮ ಉಂಟಾಗುತ್ತದೆ. ಅರ್ಥ ಪ್ರಾಥಮಿಕವಲ್ಲ. ಅದು ಅಷ್ಟು ಮುಖ್ಯವಾದದ್ದು ಅಲ್ಲ. ಅರ್ಥವು ಯಾವಾಗಲೂ ಸ್ಥಳೀಯವಾಗಿ ಇರುತ್ತದೆ. ಅದು ಚಿಕ್ಕದ್ದು. ಆದರೆ ಶಬ್ದದ ತರಂಗಗಳು, ಕಂಪನಗಳು ಅತಿ ದೊಡ್ಡದಾದದ್ದು, ಸಾರ್ವತ್ರಿಕವಾದದ್ದು. ನಾವು ಹಾಡಿ, ನಮ್ಮನ್ನು ಶಬ್ದದಿಂದ ತುಂಬಿಕೊಳ್ಳುತ್ತೇವೆ. ದೇಹವು ಆಹಾರದಿಂದ ಪೋಷಿಸಲ್ಪಟ್ಟಂತೆ, ಮಾನಸಿಕ ದೇಹವು ಭಾವನೆಗಳಿಂದ ಪೋಷಿಸಲ್ಪಟ್ಟಂತೆ, ಆತ್ಮವು ಧ್ಯಾನದಿಂದ ಪೋಷಿಸಲ್ಪಡುತ್ತದೆ. ಧ್ಯಾನದಲ್ಲಿ ಶಬ್ದವು ಲೀನವಾಗುತ್ತದೆ, ಮೌನದಲ್ಲಿ ಶಬ್ದವು ಅಂತ್ಯಗೊಳ್ಳುತ್ತದೆ. ಅದು ಬಹಳ ಉತ್ತಮವಾದದ್ದು.

ನಮ್ಮಲ್ಲಿ ಒಂದು ನಂಬಿಕೆ ಇದೆಯಲ್ಲ, ವೇದದಿಂದ ಸೃಷ್ಟಿ ಆಯಿತು ಎಂದು? ಸೃಷ್ಟಿಗೆ ಮೂಲ ಯಾವುದು? ವೇದ. ವೇದ ಅಂದರೆ ನಾದ, ಶಬ್ದ. ನಾದದಲ್ಲಿ, ವೇದದಲ್ಲಿ ಸೃಷ್ಟಿಯು ಉಂಟಾಯಿತಂತೆ. ಇಡೀ ಸೃಷ್ಟಿಯಲ್ಲಿ ಆಕಾಶ ತತ್ವವು ಅಡಗಿದೆ. ಆಕಾಶದ ಗುಣ ಶಬ್ದ. ನಮ್ಮ ಶರೀರದಲ್ಲಿ ತೊಂಬತ್ತು ಶೇಕಡದಷ್ಟು ಆಕಾಶ ಇದೆ. ಆದ್ದರಿಂದ, ಆಕಾಶದಲ್ಲಿ ತರಂಗವನ್ನು ಉಂಟು ಮಾಡುವುದಕ್ಕಾಗಿ ಶಬ್ದವನ್ನು ಉಪಯೋಗಿಸುತ್ತೇವೆ. ಶಬ್ದದಿಂದ ಶುದ್ಧಿಯಾಗುತ್ತದೆ. ಶುದ್ಧಿ ಮತ್ತು ಶಬ್ದ ಬಹಳ ಹತ್ತಿರದ ಪದಗಳು. ಶುದ್ಧಿ ಎಂದರೆ ಶುದ್ಧ ಆಗುವುದು. ಧ್ಯಾನ ಮಾಡಿದಾಗ, 'ಓಂ'ಕಾರವನ್ನು ಉಚ್ಚಾರ ಮಾಡಿ ಪ್ರಾರ್ಥನೆಯನ್ನು ಮಾಡಿದಾಗ, ಅದು ನಮ್ಮನ್ನು ಪರಮಾತ್ಮ ಹತ್ತಿರ ಕರೆದುಕೊಂಡು ಬರುತ್ತದೆ.

ಯಾವ ಯಜ್ಞವನ್ನು ಮಾಡಿದರೂ ಎಲ್ಲರೂ ಗುಂಪಾಗಿ ಸೇರಿ ಮಾಡುತ್ತಾರೆ. ಎಲ್ಲರೂ ಸೇರಿ ಉತ್ಸವವನ್ನು ಆಚರಿಸಿದಾಗ, ಅದು ಯಜ್ಞ. ಯಜ್ಞ ಎಂದರೆ ಏನು? ಸತ್ಕಾರ. ಎಲ್ಲಿ ನೀವು ಒಬ್ಬರಿಗೊಬ್ಬರು ನಿಮ್ಮಲ್ಲಿ ಸನ್ಮಾನ ಮಾಡುತ್ತೀರೋ, ಒಳ್ಳೆಯ ಗುಣಗಳ ಪೂಜೆ ಮಾಡುತ್ತೀರೊ, ವೈವೀ ಗುಣದ ಪೂಜೆಯು ಎಲ್ಲಿ ನಡೆಯುತ್ತದೊ, ಎಲ್ಲಿ ದೇವತೆಗಳ ಪೂಜೆಯನ್ನು ಮಾಡುತ್ತೀರೊ, ಅದು ಯಜ್ಞ. ''ದೇವ ಪೂಜ ಸಂಗತೀಕರಣ ದಾನೇಶು''. ಸಂಗತೀಕರಣ ಅಂದರೆ, ಎಲ್ಲರೂ ಒಂದಾಗಿ ನಡೆಯುವುದು. ಎಲ್ಲರ ಮನಸ್ಸಿನಲ್ಲೂ ಒಂದೇ ಒಳ್ಳೆಯ ಭಾವ, ಪ್ರೇಮ ಭಾವ.

ದಾನ-ನೀವು ಇನ್ನೊಬ್ಬರಿಗೆ ಕೊಡುವುದು. ದೇವ ಪೂಜೆ, ಸಂಗತೀಕರಣ, ದಾನ, ಈ ಮೂರೂ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಜ್ಞಾನ ಯಜ್ಞವನ್ನೇ ಮಾಡುತ್ತಿದ್ದೇವಲ್ಲ? ಒಬ್ಬರನ್ನೊಬ್ಬರು ಪ್ರಶಂಸಿಸಿಕೊಂಡಿರೆ? ಪ್ರತಿ ಪ್ರಶಂಸೆಯೂ ಭಗವಂತನಿಗೆ ಸೇರುತ್ತದೆ. ನಾವು ನಮ್ಮನ್ನು ಹೊಗಳಿಕೊಂಡಾಗ, ಅದು ಯಾರಿಗೆ ಸೇರುತ್ತದೆ? ಯಾರು ನಮ್ಮನ್ನು ಮಾಡಿದರೋ ಅವರಿಗೆ ಸೇರುತ್ತದೆ. ನಮ್ಮ ಪ್ರಶಂಸೆಯನ್ನು ನಾವೇ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ಬೇರೆಯವರು, ನಮ್ಮನ್ನು ಪ್ರಶಂಸಿಸಲಿ ಎಂಬ ಆಶೆಯು ನಮ್ಮಲ್ಲಿ ಇರುತ್ತದೆ. ಪ್ರಶಂಸಿಸುವುದು ದೈವೀಗುಣ.

ಶಬ್ದವು ಶುಚಿಗೊಳಿಸುತ್ತದೆ. ವೇದಗಳನ್ನು ಕೇಳಿದಾಗ, ನೀವು ಕೇಳುತ್ತಿರುವುದು ಮತ್ತು ಅದರ ಅರ್ಥ ಅಷ್ಟು ಮುಖ್ಯವಲ್ಲ. ಕೇವಲ ಆ ಶಬ್ದವೇ ಶುಚಿಗೊಳಿಸುತ್ತದೆ ಮತ್ತು ಹಿತಕರವಾದ ಕಂಪನಗಳನ್ನು ಉಂಟುಮಾಡುತ್ತದೆ. ಅವುಗಳ ಕೆಲವು ನಿಮಿಷಗಳು ಮಾತ್ರ ಸಾಕು. ಸದಾಕಾಲ ಪಠಣವನ್ನು, ಶ್ರವಣವನ್ನು ಮಾಡುವ ಅವಶ್ಯಕತೆಯು ಇಲ್ಲ. ಅದು ಸ್ನಾನ ಮಾಡಿದಂತೆ. ಕೆಲವು ನಿಮಿಷಗಳವರೆಗೆ ಮಾತ್ರ ನೀವು ಸ್ನಾನ ಮಾಡುತ್ತೀರಿ ಅಲ್ಲವೆ? ಆಗ ಇಡೀ ದಿನ ನಿಮ್ಮ ದೇಹವು ತಾಜಾ ಆಗಿದೆ ಅನ್ನಿಸುತ್ತದೆ. ಸಂಜೆ ಮತ್ತೆ ಸ್ನಾನ ಮಾಡಿದಾಗ ಮತ್ತೆ ತಾಜಾ ಅನ್ನಿಸುತ್ತದೆ. ನೀವು ಮಂತ್ರಗಳನ್ನು ಕೇಳುವ, ಭಜನೆಗಳನ್ನು ಹಾಡುವ ಆ ಕೆಲವು ಕ್ಷ ಣಗಳು, ಸುಂದರವಾದ ಆಂತರಿಕ ಸ್ನಾನ ಮಾಡಿದ ಹಾಗೆಯೇ. ಬಹಳ ಉತ್ತಮವಾದದ್ದು.

ನಮ್ಮಲ್ಲಿ, ಕನ್ನಡದಲ್ಲಿ, ಮಂತ್ರಸ್ನಾನ ಮಾಡಬೇಕು ಅನ್ನುತ್ತಾರೆ. ಮಂತ್ರ ಸ್ನಾನ ಅಂದರೆ, ನಾವು ಸ್ನಾನವನ್ನು ಮಾಡುತ್ತಾ ಇದ್ದಾಗ, ಮಂತ್ರಗಳನ್ನು ನಾವು ಹೇಳುತ್ತಾ ಇರಬೇಕು ಎಂದು ಜನರು ಅಂದುಕೊಂಡು ಬಿಟ್ಟಿದ್ದಾರೆ. ಅದು ಹಾಗೆ ಅಲ್ಲ. ನಾವು ಸುಮ್ಮನೆ ಕುಳಿತುಕೊಂಡು ಮಂತ್ರವನ್ನು ಹೇಳುತ್ತಿದ್ದ ಹಾಗೆಯೇ ಮಂತ್ರ ಸ್ನಾನವು ಒಳಗಡೆ ಆಗುತ್ತದೆ. ಒಳ್ಳೆ ಸ್ನಾನ ಮಾಡಿದಂತೆ ಅನಿಸುತ್ತದೆ. ಮಂತ್ರದಿಂದ ಮನಸ್ಸು ತಿಳಿ ಆಗುತ್ತದೆ, ತಾಜಾ ಆಗುತ್ತದೆ. ಇದಕ್ಕೆ ಮಂತ್ರಸ್ನಾನ ಅನ್ನುತ್ತಾರೆ.



Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>