Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಅಭಿಮಾನಿಗಳ ದಾಳಿ ನಿರಾಕರಿಸಿದ ಯಶ್‌

$
0
0

ತಮ್ಮ ಕಾರಿನ ಮೇಲೆ ಸೋಮವಾರ ರಾತ್ರಿ ಅಭಿಮಾನಿಗಳು ಕಲ್ಲಿನ ದಾಳಿ ನಡೆಸಿದ್ದಾರೆಂಬುದನ್ನು ನಟ ಯಶ್‌ ಸಾರಾಸಗಟಾಗಿ ನಿರಾಕರಿಸಿದ್ದು, ಕೇವಲ ಅಭಿಮಾನಿಗಳ ತಳ್ಳಾಟದಿಂದ ಈ ಘಟನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆ ಬಳಿ ಮಾತನಾಡಿದ ಅವರು, ವಾರದಿಂದ ನಾನು ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದೇನೆ. ಯಾವ ಊರಿಗೆ ಭೇಟಿ ನೀಡಿದ್ದೇನೋ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಿದ್ದರು. ಶಹಾಪುರದಲ್ಲೂ ಹೀಗೆಯೇ ಅಲ್ಲಿ ಅಂದು ರಾತ್ರಿ ಸಾಕಷ್ಟು ಅಭಿಮಾನಿಗಳು ಸೇರಿದ್ದರು. ನನ್ನನ್ನು ನೋಡಲು ಮತ್ತು ಕೈ ಕುಲುಕಲು ನೂಕುನುಗ್ಗಲು ಉಂಟಾಗಿದ್ದು ನಿಜ. ಈ ಸಂದರ್ಭದಲ್ಲಿ ಯಾರದ್ದೋ ಕೈತಾಕಿದ ಕಾರಣ ಕಾರಿನ ಹಿಂಭಾಗದ ಗಾಜು (ರೀಯರ್‌ ವಿಂಡೋ) ಒಡೆದಿದೆ. ನನ್ನ ಅಭಿಮಾನಿಗಳು ಕಾರಿಗೆ ಕಲ್ಲು ಹೊಡೆದಿದ್ದಾರೆಂಬುದು ಸುಳ್ಳು. ನನ್ನ ಅಭಿಮಾನಿಗಳಿಗೆ ಪ್ರೀತಿ ತೋರುವುದು ಗೊತ್ತಿದೆಯೇ ವಿನಾ ಕಲ್ಲು ಹೊಡೆಯುವುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಯಶ್‌.

ಇನ್ನು ಸ್ಪಷ್ಟವಾಗಿ ಹೇಳಬೇಕು ಎಂದರೆ, ನನ್ನ ತಾಯಾಣೆಗೂ ಅಭಿಮಾನಿಗಳು ಕಾರಿಗೆ ಕಲ್ಲು ಹೊಡೆದಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಆಗುವ ಕೆಲಸ ನೋಡಬೇಕಾಗಿದೆ. ಜನರಿಗೆ ಒಳ್ಳೆಯದು ಮಾಡಲು ಎಲ್ಲರೂ ಯತ್ನಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

ಸೋಮವಾರ ರಾತ್ರಿ 9 ಗಂಟೆಗೆ ಯಾದಗಿರಿ ಮೂಲಕ ಶಹಾಪುರಕ್ಕೆ ಹೊರಟಿದ್ದಾಗ ರಸ್ತೆಯಲ್ಲಿ ತಡವಾದ ಕಾರಣ ತಡವಾಗಿ ಕಾರ್ಯಕ್ರಮದ ಸ್ಥಳವನ್ನು ತಲುಪಿದ್ದರು. ಈ ಕಾರಣಕ್ಕಾಗಿ ಸ್ಥಳದಲ್ಲಿ ಕಾದು ಬೇಸತ್ತ ಅಭಿಮಾನಿಗಳು ಕಾರಿನ ಗಾಜು ಒಡೆದಿದ್ದರು ಎಂಬುದಾಗಿ ವರದಿಯಾಗಿತ್ತು.

ಶಹಾಪುರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಯಶ್‌ ಜತೆ ರೈತರ ಸಂವಾದ ಕಾರ್ಯಕ್ರಮ ಮಧ್ಯಾಹ್ನ 4 ಗಂಟೆಗೆ ನಿಗಧಿಯಾಗಿತ್ತು. ಯಶ್‌ ನೋಡಲು ಸಾವಿರಾರು ರೈತರು, ಅಭಿಮಾನಿಗಳು ಸೇರಿದ್ದರು. ಆದರೆ, ಯಶ್‌ ಅಲ್ಲಿಗೆ ಆರು ಗಂಟೆ ತಡವಾಗಿ ಬಂದು ಸೇರಿದರು. ಇಡೀ ಘಟನೆಗೆ ಇದೇ ಕಾರಣವಾಗಿತ್ತು.

ಮಾಧ್ಯಮಗಳ ಜತೆ ಮಾತನಾಡಿದಾಗ ಯಶ್‌ ಜತೆ ಅವರ ತಾರಾಪತ್ನಿ ರಾಧಿಕಾ ಪಂಡಿತ್‌ ಕೂಡಾ ಇದ್ದರು.ಶಹಾಪುರಕ್ಕೆ ನಾನು ರೈತರ ಸಮಾವೇಶಕ್ಕೆ ಹೋಗಿರಲಿಲ್ಲ. ಆದರೆ ಅಭಿಮಾನಿಗಳನ್ನು ಮೀಟ್‌ ಮಾಡಲು ಹೋಗಿದ್ದೆ. ಗಂಟೆಗಟ್ಟಲೆ ನನಗಾಗಿ ಕಾದಿದ್ದ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳಿದ್ದೇನೆ ಎಂದು ಯಶ್‌ ಹೇಳಿದ್ದಾರೆ.


Viewing all articles
Browse latest Browse all 7056

Trending Articles