Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಅಹ್ಮದ್‌ ಸಾವು, ಸಿಬಿಐ ದುರ್ಬಳಕೆ ಆರೋಪದಲ್ಲಿ ಕರಗಿದ ಕಲಾಪ

$
0
0

ಹೊಸದಿಲ್ಲಿ: ಸಂಸತ್ತಿನ ಚಳಿಗಾಳದ ಅಧಿವೇಶನದಂತೆಯೇ ಬಜೆಟ್‌ ಅಧಿವೇಶನವೂ ಪ್ರತಿಪಕ್ಷಗಳ ಗಲಾಟೆಯಲ್ಲಿ ಮುಳುಗಿಹೋಗುವ ಲಕ್ಷಣಗಳು ಕಾಣುತ್ತಿವೆ. ಸಿಬಿಐ ಅಧಿಕಾರ ದುರ್ಬಳಕೆ ಹಾಗೂ ಸಂಸದ ಇ.ಅಹ್ಮದ್‌ ಸಾವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಡೆಸಿದ ವಾಗ್ದಾಳಿಯಲ್ಲಿ ಸಂಸತ್ತಿನ ಉಭಯ ಸದನದ ಕಲಾಪಗಳು ಕೊಚ್ಚಿಹೋಗಿದೆ. ಟಿಎಂಸಿ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷ ಸದಸ್ಯರು ನಡೆಸಿದ ಗಲಾಟೆಯಿಂದ ಶುಕ್ರವಾರದ ಕಲಾಪಗಳು ಪದೇಪದೆ ಮುಂದೂಡಿಕೆಯಾದವು.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ತೃಣಮೂಲ ಕಾಂಗ್ರೆಸ್‌ ಸದಸ್ಯರು, 'ಕೇಂದ್ರ ಸರಕಾರ ಸಿಬಿಐಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ವಿವಿಧ ಪ್ರಕರಣಗಳಲ್ಲಿ ವಿನಾಃಕಾರಣ ನಮ್ಮ ಪಕ್ಷದ ಸಂಸದರನ್ನು ಬಂಧಿಸುವಂತೆ ತನಿಖಾ ಸಂಸ್ಥೆ ಮೇಲೆ ಒತ್ತಡ ಹೇರುತ್ತಿದೆ. ಸಿಬಿಐ 'ಪಂಜರದ ಗಿಳಿ'ಯಂತಾಗಿದೆ,' ಎಂದು ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಲೋಕಸಭೆ ಸ್ಪೀಕರ್‌ ಮುಂಭಾಗ ತೆರಳಿ ಸರಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೋಲಾಹಲ ಸೃಷ್ಟಿಸಿದರು. ಇದರ ಮಧ್ಯೆಯೇ ತೆಲುಗು ದೇಶಂ ಪಕ್ಷದ ಸದಸ್ಯರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು. 'ಪ್ರಶ್ನೋತ್ತರ ಅವಧಿಯನ್ನು ಹಾಳುಗೆಡಬೇಡಿ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ನಿಮಗೆ ಅನುಮತಿ ನೀಡುತ್ತೇನೆ. ಸದ್ಯಕ್ಕೆ ಶಾಂತ ರೀತಿಯಿಂದ ವರ್ತಿಸಿ,' ಎಂದು ಸ್ಪೀಕರ್‌ ಸಮಿತ್ರಾ ಮಹಾಜನ್‌ ಮಾಡಿಕೊಂಡ ಮನವಿ ಫಲ ನೀಡಲಿಲ್ಲ. ಕೊನೆಗೆ ಅವರು ಕಲಾಪವನ್ನು ತಾತ್ಕಾಲಿಕವಾಗಿ ಮುಂದೂಡಿದರು.

ತನಿಖೆಗೆ ಆಗ್ರಹ: ಮಧ್ಯಾಹ್ನದ ನಂತರ ಕಲಾಪ ಆರಂಭವಾದ ಬಳಿಕವೂ ಇದೇ ಪರಿಸ್ಥಿತಿ ಇತ್ತು. ಟಿಎಂಸಿ ಜತೆಗೂಡಿದ ಕಾಂಗ್ರೆಸ್‌ ಸದಸ್ಯರು, 'ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌' ಸಂಸದ ಇ.ಅಹ್ಮದ್‌ ಅವರ ಸಾವಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಿರುವುದೇ ಕಾರಣ. ಅವರ ನಿಧನದ ಬಳಿಕವೂ ಬಜೆಟ್‌ ಮಂಡಿಸಿ ಸರಕಾರ, ಕುಟುಂಬಸ್ಥರಿಗೆ ಅವಮಾನ ಮಾಡಿದೆ. ಅವರ ಸಾವಿನ ಕುರಿತು ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಜ್ಯೋತಿರಾಧಿತ್ಯ ಸಿಂದಿಯಾ, ಆರ್‌ಎಸ್‌ಪಿ ಸದಸ್ಯ ಎನ್‌.ಕೆ.ಪ್ರೇಮಚಂದ್ರನ್‌, ಕಾಂಗ್ರೆಸ್‌ ಸದಸ್ಯ ಕೆ.ಸಿ.ವೇಣುಗೋಪಾಲ್‌, ಸಿಪಿಎಂ ಸದಸ್ಯ ಪಿ.ಕರುಣಾಕರನ್‌ ಅವರು ಸರಕಾರದ ವಿರುದ್ಧ ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಪೀಕರ್‌, 'ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಅವಕಾಶ ಕೊಡಿ. ಅದುಬಿಟ್ಟು ಗಲಾಟೆ ಮಾಡುವುದು ಸರಿಯಲ್ಲ. ಸಮಾಧಾನದಿಂದ ಇರಿ,' ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಪಕ್ಷ ಗಳು ಜಗ್ಗದಿದ್ದ ಕಾರಣ ಸ್ಪೀಕರ್‌ ಪುನಃ ಕಲಾಪ ಮುಂದೂಡಿದರು. ಸ್ವಲ್ಪ ಹೊತ್ತಿನ ಬಳಿಕ ಕಲಾಪ ಆರಂಭ ವಾದರೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಇತ್ತ ರಾಜ್ಯಸಭೆಯಲ್ಲೂ ಇದೇ ತೆರನಾದ ಸನ್ನಿವೇಶಗಳು ಮರುಕಳಿಸಿದವು.

ಸಂಸತ್ತಿನಲ್ಲಿ ಚರ್ಚೆ ನಡೆಯಲಿ:

'ದಿಲ್ಲಿಯ ಆರ್‌ಎಂಎಲ್‌ ಲೋಧಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸಂಸದ ಇ.ಅಹ್ಮದ್‌ ಅವರ ನಿಧನ ವಿಚಾರವನ್ನು ವೈದ್ಯರು ಪ್ರಕಟಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಈ ವಿಷಯ ಗೊತ್ತಿದ್ದರೂ ಸರಕಾರ, ಫೆ.1ರಂದು ಬಜೆಟ್‌ ಮಂಡನೆಯಾಗುವವರೆಗೂ ಖಚಿತಪಡಿಸದಂತೆ ಆಸ್ಪತ್ರೆಯವರಿಗೆ ಸೂಚನೆ ನೀಡಿದ್ದರು. ಹೀಗಾಗಿಯೇ ಆಸ್ಪತ್ರೆ ಸಿಬ್ಬಂದಿ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಇದೆಲ್ಲವೂ ವ್ಯವಸ್ಥಿತವಾಗಿ ನಡೆದಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯಬೇಕು,' ಎಂದು ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಗುಲಾಂ ನಬಿ ಆಜಾದ್‌ ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಂಗಳವಾರ (ಜ.31) ಭಾಷಣ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದುಬಿದ್ದಿದ್ದ ಅಹ್ಮದ್‌ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಆರ್‌ಎಲ್‌ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಅವರ ನಿಧನವನ್ನು ಆಸ್ಪತ್ರೆ ಪ್ರಕಟಿಸಿತ್ತು.

ಸಾವಿನಲ್ಲಿ ರಾಜಕೀಯ ಮಾಡಬೇಡಿ...

ಹೊಸದಿಲ್ಲಿ: ಸಂಸದ ಇ.ಅಹ್ಮದ್‌ ನುರಿತ ಸಂಸದೀಯ ಪಟುವಾಗಿದ್ದರು. ಅವರ ಸಾವಿನಲ್ಲಿ ರಾಜಕೀಯ ಮಾಡಬೇಡಿ. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಸರಕಾರ ಪ್ರತಿಪಕ್ಷಗಳಲ್ಲಿ ಮನವಿ ಮಾಡಿಕೊಂಡಿದೆ. 'ಅಹ್ಮದ್‌ ಅವರ ನಿಧನ ವಿಚಾರವಾಗಿ ಆರ್‌ಎಂಎಲ್‌ ಆಸ್ಪತ್ರೆಯ ವೈದ್ಯರು ಈಗಾಗಲೇ ವಿವರವಾದ ಹೇಳಿಕೆ ಬಿಡುಗಡೆಮಾಡಿಯಾಗಿದೆ. ಇವರ ದಿಢೀರ್‌ ನಿಧನವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬೇಡಿ. ಸುಗಮ ಕಲಾಪಕ್ಕೆ ಎಲ್ಲ ಪಕ್ಷಗಳು ಸಹಕರಿಸಬೇಕು' ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕಮಾರ್‌ ಮನವಿ ಮಾಡಿಕೊಂಡಿದ್ದಾರೆ.

ಸಂಸದ ಇ.ಅಹ್ಮದ್‌ ಅವರು ನಿಧನರಾಗಿದ್ದರೂ ಬಜೆಟ್‌ ಮಂಡನೆಯಾಗುವವರೆಗೂ ಅವರ ಸಾವಿನ ಸುದ್ದಿ ಪ್ರಕಟಿಸದಂತೆ ಸರಕಾರ ಆರ್‌ಎಂಎಲ್‌ ಆಸ್ಪತ್ರೆಯ ವೈದ್ಯರ ಮೇಲೆ ಒತ್ತಡ ಹೇರಿತ್ತು. ಅಹ್ಮದ್‌ ಅವರ ಮಗಳು, ಅಳಿಯ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಯಾರಿಗೂ ಮೃತದೇಹ ನೋಡಲು ಅವಕಾಶ ನೀಡಲಿಲ್ಲ. ಸರಕಾರ ಈ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ. ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು.

-ಮಲ್ಲಿ ಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದ


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಎಡಗೈ ಬಳಕೆದಾರರ ದಿನದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>