Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಈ ಏರಿಯಾದಲ್ಲಿ ಡಾಂಬರ್‌ ಭಾಗ್ಯವೇ ಇಲ್ಲ

$
0
0

ಕಾರವಾರ:ಇಲ್ಲಿ ಪ್ರಸಿದ್ಧ ಅಶ್ವತ್ಥನಾರಾಯಣ ಮಹಾಗಣಪತಿ,ಚಂದ್ರಾದೇವಿ,ಸಾಯಿಮಂದಿರ,ಕೋಟೇಶ್ವರ,ದೇವತೆದೇವಸ್ಥಾನ,ಬ್ರಹ್ಮದೇವಸ್ಥಾನ ಮುಂತಾದ ಪ್ರಮುಖ ದೇವಾಲಯಗಳು ಇವೆ.

ಎರಡು ಸರಕಾರಿಕನ್ನಡ ಶಾಲೆ, 3 ಅಂಗನವಾಡಿ ಕೇಂದ್ರ ತೆರೆಯಲಾಗಿದೆ.ಅದರಲ್ಲಿ 2 ಕೇಂದ್ರಗಳಿಗೆ ಸ್ವಂತ ಕಟ್ಟಡ ಹಾಗೂ ಒಂದು ಬಾಡಿಗೆಕಟ್ಟದಲ್ಲಿ ನಡೆಯುತ್ತಿದೆ.ಆದರೆ ಇಲ್ಲಿನ ರಸ್ತೆ ಪಕ್ಕದಲ್ಲಿ ಚರಂಡಿಗಳಿಲ್ಲದೇ,ಮಳೆಗಾಲದಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗದೇ, ಸಾರ್ವಜನಿಕರು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಇಲ್ಲಿನ ರಸ್ತೆಗಳಿಗೆ ಡಾಂಬರೀಕರಣಗೊಳಿಸಿ ದಶಕಗಳೇ ಉರುಳಿವೆ. ಆದರೆ ರಸ್ತೆಗಳ ಡಾಂಬರು ಕಿತ್ತು ಹೋಗಿ ರಸ್ತೆಯ ದುಸ್ಥಿತಿ ಹೇಳತೀರದು.ನಗರಸಭೆ ಮಾತ್ರ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರ ಆರೋಪ.

ಮುಖ್ಯವಾಗಿ ಚಂದ್ರಾದೇವಿ ರಸ್ತೆಯ ಸ್ಥಿತಿ ದುಸ್ಥಿತಿಯಲ್ಲಿದೆ. ಇದೇ ರಸ್ತೆಗೆ ಎರಡು ಕಿರು ಸೇತುವೆಗಳಿದ್ದು,ಸೇತುವೆಯ ಅಡಿಯಲ್ಲಿ ಹಾಕಿರುವ ಸಿಮೆಂಟ್‌ ಪೈಪ್‌ಗಳು ಮಣ್ಣಿನಲ್ಲಿ ಹೂತು ಹೋಗಿವೆ. ಈ ಭಾಗದಲ್ಲಿ ಈ ಕಿರು ಸೇತುವೆ ತಗ್ಗು ಪ್ರದೇಶದಲ್ಲಿದೆ.ಹೀಗಾಗಿ ಇಲ್ಲಿಂದ ನೀರು ಸರಿಯಾಗಿ ಹರಿಯದೇ, ಮಳೆಗಾಲದಲ್ಲಿ ಭಾರಿ ಮಳೆಗೆ ನೀರು ರಸ್ತೆ ಮೇಲೆ ನಿಲ್ಲುತ್ತದೆ.ಇದರಿಂದ ಕಿರು ಸೇತುವೆ ಮೇಲಿನ ಡಾಂಬರು ಕಿತ್ತು ಹೋಗಿದೆ.ಡಾಂಬರೀಕರಣ ಮಾಡುವುದು ಅವಶ್ಯಕವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ನೀರಿಗೆ ತೊಂದರೆ ಇಲ್ಲ:

ಇಲ್ಲಿ ಜನರು ಹೆಚ್ಚಾಗಿ ಬಾವಿ ನೀರನ್ನು ಉಪಯೋಗಿಸುತ್ತಾರೆ. ಆದರೆ ನಗರಸಭೆ ನಲ್ಲಿ ನೀರಿನ ಸಂಪರ್ಕವನ್ನೂ ಪಡೆದಿದ್ದಾರೆ. ಅಂತರ್ಜಲ ತುಂಬ ಮೇಲಿದ್ದು,ಬಾವಿಯಲ್ಲಿ ನೀರಿಗೆ ಬರವಿಲ್ಲ.ಇಲ್ಲಿ ಬಯಲು ಪ್ರದೇಶ ಹೆಚ್ಚಿದ್ದು, ಮನೆಗಳು ಕೂಡ ಬಹಳ ಅಂತರದಲ್ಲಿವೆ.ಇದರಿಂದ ಬಾವಿಯಲ್ಲಿ ಶುದ್ಧ ನೀರು ಪಡೆಯಬಹುದು ಎಂದು ಸ್ಥಳೀಯರು ತಿಳಿಸುತ್ತಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>