Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ತ್ಯಾಜ್ಯ ಆಹಾರ ತಿಂದು ಹಸು ಸಾವು

$
0
0

ಶಿರಸಿ:ಯಾರೋ ಬೇಕಾಬಿಟ್ಟಿಯಾಗಿ ಬೀಸಾಕಿ ಹೋಗಿದ್ದ ತ್ಯಾಜ್ಯ ಆಹಾರವನ್ನು ತಿಂದು ಒಂದು ಹಸು ಮೃತಪಟ್ಟು ನಾಲ್ಕು ಹಸುಗಳು ಅಸ್ವಸ್ಥಗೊಂಡ ಘಟನೆ ನಗರದ ಬಳಿಯ ಸುಬ್ರಾಯಕೊಡ್ಲಿಯಲ್ಲಿ ಮಂಗಳವಾರ ನಡೆದಿದೆ.

ಹೆಚ್ಚಾಗಿ ಉಳಿದ ತ್ಯಾಜ್ಯ ಆಹಾರವನ್ನು ಸೋಮವಾರ ರಸ್ತೆಯಂಚಿನಲ್ಲಿ ಯಾರೋ ಎಸೆದಿದ್ದರು. ಎಂದಿನಂತೆ ಮೇವಿಗೆ ತೆರಳಿದ್ದ ಮೂಕ ಪ್ರಾಣಿಗಳು ಅವುಗಳನ್ನು ತಿಂದಿವೆ. ಇದನ್ನು ಅರಗಿಸಿಕೊಳ್ಳಲಾಗದೇ ಸ್ಥಳೀಯ ಸುಬ್ರಾಯಕೊಡ್ಲಿನ ಕೃಷ್ಣ ಶಿವು ಭಟ್ಟ ಎನ್ನುವವರಿಗೆ ಸೇರಿದ ಹಸು ಮೃತಪಟ್ಟಿದೆ. ಇದೇ ರೀತಿಯಲ್ಲಿ ಪರಮೇಶ್ವರ ರಾಮನಾಥ ಭಟ್‌ ಮತ್ತಿತರರಿಗೆ ಸೇರಿದ ನಾಲ್ಕು ಹಸುಗಳು ಅಸ್ವಸ್ಥಗೊಂಡಿದೆ. ವಿಷಯ ತಿಳಿದ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ನರಸಿಂಹ ಮಾರ್ಕಂಡೆ ಅವರು ಅಸ್ವಸ್ಥಗೊಂಡ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮನುಷ್ಯ ತಿನ್ನುವ ಆಹಾರ ಜೀರ್ಣೀಸಿಕೊಳ್ಳುವ ಶಕ್ತಿ ಹಸುಗಳಿಗೆ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿಗೆ ತಿಂದಲ್ಲಿ ಅವುಗಳ ಆರೋಗ್ಯ ಹೀಗೆ ಹದಗೆಡುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಯಾರೋ ರಾತ್ರಿಯ ಸಂದರ್ಭದಲ್ಲಿ ನಗರಕ್ಕೆ ಹೊಂದಿಕೊಂಡಿರುವ ಸುಬ್ರಾಯಕೊಡ್ಲು ಮತ್ತು ದೇವನಿಲಯ ಪ್ರದೇಶದಲ್ಲಿ ಉಳಿದ ಆಹಾರವನ್ನು ತಂದು ಎಸೆದುಹೋಗುತ್ತಿರುವುದು ಇಂಥ ಅವಘಡಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>