Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ನೋಟು ರದ್ದು: ಅಡಕೆ ಮಾರುಕಟ್ಟೆಯಲ್ಲಿ ಅಡಚಣೆ

$
0
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ನಿಷೇಧಿಸಿರುವುದರಿಂದ ರಾಜ್ಯದ ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಅಡಕೆ ಬೆಳೆಗಾರರಿಗೆ ಸದ್ಯಕ್ಕೆ ಧಾರಣೆ ಕುಸಿತದ ಬಿಸಿ ತಟ್ಟಿದೆ.

ಶಿವಮೊಗ್ಗ:

ನೋಟು ರದ್ಧತಿ ಚಿನ್ನ, ಬೆಳ್ಳಿ, ತರಕಾರಿ, ದಿನಸಿಗಳ ಬೆಲೆಯನ್ನು ಏರಿಳಿಸಿದಂತೆ ರಾಜ್ಯದಲ್ಲಿ ಅತಿದೊಡ್ಡ ಅಡಕೆ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಅಡಕೆ ಧಾರಣೆ ಕುಸಿತಕ್ಕೂ ಕಾರಣವಾಗಿದೆ.

ನೋಟು ರದ್ಧತಿಯಿಂದ ಅಡಕೆ ಧಾರಣೆ ಕೇವಲ 3 ದಿನದಲ್ಲಿ 2 ಸಾವಿರದಿಂದ 6 ಸಾವಿರ ರೂ. ಕುಸಿತ ಕಂಡಿದೆ. ಅತಿ ಹೆಚ್ಚು ಆವಕವಾಗುವಂತಹ ರಾಶಿ ಇಡಿಯು 2500 ರೂ. ಕುಸಿತವಾದರೆ, ಉತ್ತಮ ಗುಣಮಟ್ಟದ ಸರಕಿನ ಗರಿಷ್ಠ ಧಾರಣೆಯು 6ಸಾವಿರ ರೂ. ಕುಸಿತ ಕಂಡಿದೆ. ಬೆಟ್ಟೆ ಧಾರಣೆ ಸಹ 2000 ರೂ. ಕುಸಿತವಾಗಿದೆ.

ಅಡಕೆ ವ್ಯಾಪಾರದಲ್ಲಿ ಪ್ರಮುಖವಾಗಿ ಬಳಕೆಯಾಗುವುದು 500 ಮತ್ತು 1ಸಾವಿರ ರೂ. ನೋಟುಗಳು. ಇವುಗಳ ರದ್ಧತಿಯಿಂದಾಗಿ ಅಡಕೆ ಮಾರಾಟ ಮಾಡಿದ ಬೆಳೆಗಾರರಿಗೆ ಬಟವಾಡೆ ಮಾಡುವುದು ಸಾಧ್ಯವಿಲ್ಲ. ಬೆಳೆಗಾರರು ಖರೀದಿಯಾಗುತ್ತಿದ್ದಂತೆ ಹಣ ಕೇಳುತ್ತಾರೆಂಬ ಕಾರಣಕ್ಕೆ ಎಪಿಎಂಸಿಯಲ್ಲಿ ಬಹಳಷ್ಟು ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ 15 ದಿನ ತೆಗೆದುಕೊಳ್ಳಬಹುದು ಎನ್ನುತ್ತಾರೆ.

ದಾವಣಗೆರೆ:

ಚನ್ನಗಿರಿಯ ಅಡಕೆ ಖರೀದಿ ಕೇಂದ್ರ ತುಮ್‌ಕೋಸ್ ಮೇಲೂ ನೋಟು ಬದಲಾವಣೆ ಸಾಕಷ್ಟು ಪರಿಣಾಮ ಬೀರಿದ್ದು ಶುಕ್ರವಾರ ನಡೆಯಬೇಕಿದ್ದ ಮಾರುಕಟ್ಟೆಯನ್ನೇ ಸ್ಥಗಿತಗೊಳಿಸಲಾಗಿದೆ. ಪ್ರತೀ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಚನ್ನಗಿರಿಯಲ್ಲಿ ವಹಿವಾಟು ನಡೆಯಲಿದ್ದು, ಬುಧವಾರ 29 ಸಾವಿರ ದರವಿತ್ತು. ನೋಟುಗಳ ಬದಲಾವಣೆಯಿಂದ ಬೇರೆ ಮಾರುಕಟ್ಟೆಗಳಲ್ಲಿ ಪ್ರತೀ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂ. ದರ ಕುಸಿದಿದೆ. ಇದು ಇಲ್ಲಿಯೂ ಎಫೆಕ್ಟ್ ಆಗಬಹುದೆಂದು ಚನ್ನಗಿರಿ ಮಾರುಕಟ್ಟೆ ನಡೆದಿಲ್ಲ.

ಶಿರಸಿ:

ಹಣದ ವಿನಿಮಯಕ್ಕೆ ತೊಂದರೆಯಾದ ಕಾರಣದಿಂದ ಕಳೆದ ಎರಡು ದಿನಗಳಿಂದ ಇಲ್ಲಿಯ ಮಾರುಕಟ್ಟೆ ಬಂದ್ ಆಗಿದೆ. ಇದರಿಂದ ಎಪಿಎಂಸಿ ಪ್ರಾಂಗಣದಲ್ಲಿ ಅಡಕೆ ವಹಿವಾಟು ಇಲ್ಲದೇ ಬಿಕೋ ಎನ್ನುವಂತಾಗಿದೆ.

ಪ್ರಮುಖ ಅಡಕೆ ವಹಿವಾಟು ಕೆಂದ್ರವಾದ ಇಲ್ಲಿನ ಎಪಿಎಂಸಿ ಆವಾರದಲ್ಲಿ ನಿತ್ಯ ಸಾವಿರಾರು ಕ್ವಿಂಟಲ್ ಅಡಕೆ ವ್ಯಾಪಾರ, ವಹಿವಾಟು ನಡೆಯುತ್ತದೆ. ನೂರಾರು ರೈತರು ತಮ್ಮ ಉತ್ಪನ್ನ ತಂದು ಮಾರಾಟ ಮಾಡುವುದು ವರ್ಷವಿಡೀ ನಡೆಯುತ್ತಿರುತ್ತದೆ.

ಸುಧಾರಣೆಯ ನಿರೀಕ್ಷೆ:

ಭವಿಷ್ಯದಲ್ಲಿ ಅಡಕೆ ಮಾರುಕಟ್ಟೆ ಗಣನೀಯ ಸುಧಾರಣೆ ಕಾಣಲಿದೆ. ಮುಖ್ಯವಾಗಿ ಹವಾಲಾ ಹಣದ ಬಳಕೆ ಇಲ್ಲಿ ನಿರ್ಮೂಲನೆಯಾಗಲಿದೆ. ಇದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಕ್ಯಾಂಪ್ಕೊ ತಿಳಿಸಿದೆ.

‘‘500 ರೂ. ಮತ್ತು 1,000 ರೂ. ಕರೆನ್ಸಿಯ ನಿಷೇಧದಿಂದ ಅಡಕೆ ಧಾರಣೆಯಲ್ಲಿ ಉಂಟಾಗಿರುವ ಏರಿಳಿತ ತಾತ್ಕಾಲಿಕವಾಗಿದ್ದು, ಕೇಂದ್ರ ಸರಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ಅಡಕೆ ಮಾರುಕಟ್ಟೆ ವ್ಯವಸ್ಥಿತವಾಗಿ ಬೆಳೆಯಲಿದೆ. ಸದ್ಯಕ್ಕೆ ಬ್ಯಾಂಕ್‌ಗಳಲ್ಲಿ ನಗದು ಹಿಂತೆಗೆತಕ್ಕೆ ಮಿತಿ ಇರುವುದರಿಂದ ಕ್ಯಾಂಪ್ಕೊ, ತನ್ನ ಸದಸ್ಯರಿಂದ ಅಡಕೆ ಖರೀದಿಯಲ್ಲೂ ಮಿತಿಯನ್ನು ಹೇರಿದೆ. ಇದರಿಂದ ಮಾರುಕಟ್ಟೆಯಲ್ಲಿ ದರ ಕುಸಿತ ತಡೆಯಲು ಸಹಕಾರಿಯಾಗಿದೆ. ಬ್ಯಾಂಕಿಂಗ್ ವ್ಯವಹಾರಗಳು ಸಹಜ ಸ್ಥಿತಿಗೆ ಬಂದ ಕೂಡಲೇ ಕ್ಯಾಂಪ್ಕೊ ತನ್ನ ಖರೀದಿ ಮಿತಿಯನ್ನೂ ತೆರವುಗೊಳಿಸಲಿದೆ. ಪ್ರಸ್ತುತ ವಾರಕ್ಕೆ 20,000 ರೂ. ಬೆಲೆಯ ಅಡಕೆಯನ್ನು ಸದಸ್ಯರು ಕ್ಯಾಂಪ್ಕೋಗೆ ಮಾರಬಹುದು’’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಹೇಳಿದರು.

ಅಸಂಘಟಿತ ವಲಯದ ಅಡಕೆ ಮಾರುಕಟ್ಟೆಯಲ್ಲಿ ನಗದು ಮೂಲಕವೇ ವ್ಯವಹಾರ ನಡೆಯುತ್ತದೆ. ಅಲ್ಲಿ ಹವಾಲಾ ಹಣವೂ ಬಳಕೆಯಾಗುತ್ತಿದೆ. ಆದರೆ ಕೇಂದ್ರ ಸರಕಾರ ನಗದುರಹಿತ ಹಣಕಾಸು ವರ್ಗಾವಣೆ ಮತ್ತು ದೊಡ್ಡ ಮೊತ್ತದ ಕರೆನ್ಸಿ ನಿಷೇಧಿಸಿದ ಪರಿಣಾಮ, ಹವಾಲಾ ಹಣ ಬಳಕೆಗೆ ಭಾರಿ ಅಡ್ಡಿಯಾಗಿದೆ ಎಂದರು.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>