Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಬಳ್ಳಾರಿ ಟಸ್ಕರ್ಸ್‌ ತಂಡಕ್ಕೆ ರಾಗಿಣಿ ಒಡೆತನ

$
0
0

-ಪದ್ಮಾ ಶಿವಮೊಗ್ಗ

ನಟಿ ರಾಗಿಣಿ ಚಿತ್ರರಂಗದಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತದಲ್ಲೂ ಆಪಾರ ಆಸಕ್ತಿ ಹೊಂದಿದ್ದಾರೆ. ಇದಕ್ಕೂ ಮೊದಲು ಅವರು ಎರಡು ವರ್ಷಗಳ ಕಾಲ ಬ್ಲೈಂಡ್‌ ಕ್ರಿಕೆಟ್‌ ಲೀಗ್‌ನ ಅಂಬಾಸಡರ್‌ ಆಗಿದ್ದವರು. ಆಗ ಅವರಿಗೆ ಕ್ರೀಡಾಕ್ಷೇತ್ರದ ಭಾಗವಾಗಿ ತಾವು ಮುಂದುವರಿಯಬೇಕು ಅನ್ನಿಸಿತಂತೆ. ಈಗ ಅರವಿಂದ್‌ ವೆಂಕಟೇಶ್‌ ರೆಡ್ಡಿ ಮತ್ತು ರಾಗಿಣಿ ಇಬ್ಬರೂ ಸೇರಿ ಬಳ್ಳಾರಿ ಟಸ್ಕರ್‌ ಕ್ರಿಕೆಟ್‌ ತಂಡವನ್ನು ಕೊಂಡುಕೊಂಡಿದ್ದಾರೆ. ಲೀಗ್‌ ಇಂದಿನಿಂದ ಆರಂಭವಾಗುತ್ತಿದೆ.

'ಆ್ಯಕ್ಟಿಂಗ್‌ ಮತ್ತು ಕಂಪನಿಗಳಿಗೆ ಅಂಬಾಸಡರ್‌ ಆಗುವುದರ ಜತೆ ಕ್ರಿಕೆಟ್‌ ಲೀಗ್‌ ಕಡೆ ಕೂಡ ಗಮನ ಕೊಡಬೇಕು ಅನ್ನಿಸಿತು. ಈ ಹಿಂದೆ ಬ್ಲೈಂಡ್‌ ಆಟಗಾರರ ಸಾಮರ್ಥ್ಯ‌ ನೋಡಿದಾಗ ಆಶ್ಚರ್ಯ ಆಯ್ತು. ಅವರು ಡಿಸೆಬಿಲಿಟಿಯನ್ನು ಸಾಮರ್ಥ್ಯ‌ವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಇದು ನನಗೆ ಸ್ಫೂರ್ತಿ. ಹಾಗೇ ಸಣ್ಣಪುಟ್ಟ ಊರುಗಳಲ್ಲಿ ಇರುವ ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಅಗತ್ಯ ಇದೆ ಅನ್ನಿಸಿದ್ದೇ ಬಳ್ಳಾರಿ ಟಸ್ಕರ್‌ ಕೊಂಡುಕೊಳ್ಳಲು ಕಾರಣ' ಎಂದಿದ್ದಾರೆ ರಾಗಿಣಿ.

ಬೇರೆ ಬೇರೆ ಪ್ರದೇಶಗಳಲ್ಲಿರುವ ಪ್ರತಿಭಾವಂತ ಕ್ರಿಕೆಟ್‌ ಪಟುಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತಿರುವುದು ಅವರಿಗೆ ಖುಷಿ ಕೊಟ್ಟಿದೆ. 'ತಂಡದಲ್ಲಿ ಒಬ್ಬಳಾಗಿ ಇರಲು ನಾನು ಬಯಸುತ್ತೇನೆ. ಬಳ್ಳಾರಿ ಟಸ್ಕರ್ಸ್‌ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ಕೋಚಿಂಗ್‌, ಗೈಡೆನ್ಸ್‌, ಮೆಂಟರ್‌ಗಳ ವ್ಯವಸ್ಥೆ ಮಾಡಿದ್ದೇವೆ. ಇವರು ನ್ಯಾಷನಲ್‌ ಲೆವೆಲ್‌ನಲ್ಲಿ ಆಡುವಂತಾಗಬೇಕು. ಈ ತಂಡದ ಮಾಲಿಕರಲ್ಲೊಬ್ಬರಾದ ಅರವಿಂದ್‌ ಅವರು ಲಾಯರ್‌ ಆಗಿದ್ದರೂ ಕ್ರೀಡೆಗೆ ತುಂಬಾ ಪ್ರೋತ್ಸಾಹ ಕೊಡುತ್ತಾರೆ. ಸಾಮಾನ್ಯವಾಗಿ ಎಲ್ಲಾ ಲೀಗ್‌ಗಳು ಬೆಂಗಳೂರಿನಲ್ಲೇ ಆಗೋದು. ಆದರೆ, ಈ ಲೀಗ್‌ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೀತಿವೆ. ಇದರಿಂದ ಬೇರೆ ಊರುಗಳಲ್ಲಿರುವವರಿಗೂ ಇದರ ಬಗ್ಗೆ ಆಸಕ್ತಿ ಬರುತ್ತೆ' ಎನ್ನುತ್ತಾರೆ ರಾಗಿಣಿ.

ಬಳ್ಳಾರಿ ಟಸ್ಕರ್ಸ್‌ಗೆ ಪ್ರಾಯೋಜಕತ್ವವನ್ನು ಡಾ. ಶೈಲೇಶ್‌ ಕುಮಾರ್‌ ಫೌಂಡೇಷನ್‌ ನೀಡುತ್ತಿದೆ. 'ಡಾ. ಶೈಲೇಶ್‌ ವೃತ್ತಿಯಲ್ಲಿ ಜನಪ್ರಿಯ ಸರ್ಜನ್‌ ಆಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಜನರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಜನಪರ ಕೆಲಸ ಮಾಡುತ್ತಿದ್ದಾರೆ. ಇದರ ಜತೆ ಕ್ರಿಕೆಟ್‌ಗೂ ಪ್ರೋತ್ಸಾಹ ನೀಡುತ್ತಿದ್ದಾರೆ' ಎನ್ನುತ್ತಾರೆ ರಾಗಿಣಿ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>