Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ದಕ್ಷಿಣ ದಿಕ್ಕೂ ಒಳ್ಳೆಯದು

$
0
0



ದಕ್ಷಿಣ ದಿಕ್ಕೆಂದರೆ ಕೆಲವರಿಗೆ ಅದೇನೋ ಅಂಜಿಕೆ. ಮತ್ತೆ ಕೆಲವರಿಗೆ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ ಒಳ್ಳೆಯದಲ್ಲ ಎನ್ನುವ ಅಪನಂಬಿಕೆ. ದಕ್ಷಿಣ ದಿಕ್ಕಿನ ಫಲವೇನು ಎಂಬುದಕ್ಕೆ ಉತ್ತರ ಇಲ್ಲಿದೆ.

- ಎಚ್‌.ಎಲ್‌.ನರಸಿಂಹಮೂರ್ತಿ

ಸಾರ್‌, ನಮ್ಮ ಮನೆ ಬಾಗಿಲು ದಕ್ಷಿಣಕ್ಕಿದೆ. ಹಾಗಂತ ಮನೆ ಬಾಡಿಗೆಗೆ ಬರೋಕೇ ಜನರು ಹಿಂಜರಿಯುತ್ತಿದ್ದಾರೆ ಎಂದು ಜನರು ಅಲವತ್ತುಗೊಳ್ಳುವುದನ್ನು ನಾವು ನೋಡಿರುತ್ತೇವೆ. ಬಹಳಷ್ಟು ಜನರಿಗೆ ದಕ್ಷಿಣ ದಿಕ್ಕಿನ ಬಗ್ಗೆ, ಅದರ ಫಲಾಫಲಗಳ ಬಗ್ಗೆ ಅಷ್ಟಾಗಿ ಅರಿವಿದ್ದಂತಿಲ್ಲ. ಅವರು ತಪ್ಪು ಕಲ್ಪನೆಯಲ್ಲೇ ತಡಕಾಡುತ್ತಾರೆ. ಇನ್ನಿಲ್ಲದ ಯೋಚನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒದ್ದಾಡುತ್ತಾರೆ.

ನಿವೇಶನದ ದಕ್ಷಿಣಕ್ಕೆ ರಸ್ತೆ ಇದ್ದರೆ, ದಕ್ಷಿಣದ ಮಧ್ಯದ ನಿವೇಶನವಿದ್ದರೆ, ದಕ್ಷಿಣ ಆಗ್ನೇಯ ಪ್ರಶಸ್ತವಾದ ಗೇಟು ಇಡಲು ಅಥವಾ ಬಾಗಿಲು ಇಟ್ಟುಕೊಂಡರೆ ಅದರಿಂದ ಸಾಕಷ್ಟು ಶುಭಫಲಗಳು ಉಂಟಾಗುತ್ತವೆ. ಪೂರ್ವಾಗ್ನೇಯ ನಿವೇಶನವಿದ್ದರೆ ಪೂರ್ವ ಈಶಾನ್ಯಕ್ಕೆ ಗೇಟು, ಬಾಗಿಲು ಇಟ್ಟರೆ ಪ್ರಶಸ್ತವಾಗಿರುತ್ತದೆ. ದಕ್ಷಿಣಕ್ಕೆ ಪೂರ್ತಿ ಕಾಂಪೌಂಡ್‌ ಹಾಕಿ ದಕ್ಷಿಣ ಆಗ್ನೇಯದಲ್ಲಿ ಚಿಕ್ಕ ಗೇಟು ಇಟ್ಟರೆ ಪ್ರಶಸ್ತವಾಗಿರುತ್ತದೆ.

ನಿವೇಶನದ ಆಗ್ನೇಯದಲ್ಲಿ ಮಹಾಮರ್ಮ ಸ್ಥಾನ ಬಹಳ ಶಕ್ತಿಯುತವಾಗಿರುತ್ತದೆ. ಯಾಕೆಂದರೆ ಭೂಮಿಗೆ ಸೂರ್ಯನ ಕಿರಣಗಳು ಹೇಗೆ ಪ್ರಾಮುಖ್ಯವೋ ಹಾಗೇ, ಭೂಮಿಯ ಶಕ್ತಿ ಉತ್ಪತ್ತಿ ಎಂದರೆ ಭೂಮಿಯ ಎಲ್ಲಾ ಕೆಲಸ ಕಾರ್ಯಗಳಿಗೂ ಚಾಲನೆ ಇದ್ದಂತೆ. ಅಗ್ನಿ, ಪಂಚಭೂತಗಳಲ್ಲಿ ಅತಿ ಮುಖ್ಯವಾದ ಸ್ಥಾನವನ್ನು ಹೊಂದಿರುತ್ತದೆ. ಅದರಲ್ಲೂ ಆಗ್ನೇಯ ಮಹಾಮರ್ಮಸ್ಥಾನ ಪವಿತ್ರವಾದ ಸ್ಥಾನ. ದಕ್ಷಿಣ ಆಗ್ನೇಯ ದ್ವಾರ ಸಂಸಾರ ಬುದ್ಧಿಯ ಸಂಕೇತ ಹಾಗೂ ಸುಖಕ್ಕೆ ಸಂಕೇತ.

ಉದಾಹರಣೆಗೆ ತಿರುಪತಿ ತಿರುಮಲ ದೇವಸ್ಥಾನದ ಮಧ್ಯಭಾಗದಲ್ಲಿ ಶ್ರೀ ವೆಂಕಟೇಶ್ವರನ ದರ್ಶನಕ್ಕೆಂದು ಮೂಲಸ್ಥಾನಕ್ಕೆ ಹೋದರೆ ಎಲ್ಲಾ ಭಕ್ತರು ದಕ್ಷಿಣ, ಆಗ್ನೇಯ ಭಾಗದಿಂದಲೇ ಒಳಗೆ ಹೋಗಿ ಪರಮಾತ್ಮನನ್ನು ದರ್ಶಿಸಿ ದಕ್ಷಿಣ ಭಾಗದಿಂದಲೇ ಹೊರ ಬರುತ್ತಾರೆ. ಇದು ಎಲ್ಲರ ಗಮನಕ್ಕೂ ಬಂದಿರುವ ಸಂಗತಿ. ಪರಮಾತ್ಮ ಪೂರ್ವಕ್ಕೆ ಇದ್ದರೂ ದಕ್ಷಿಣ ದಿಕ್ಕಿಗೆ ಎಲ್ಲಾ ಭಕ್ತರು, ದಕ್ಷಿಣಾಜ್ಞೇಯದಲ್ಲಿ ಪ್ರವೇಶವನ್ನು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಶತಶತಮಾನಗಳಿಂದಲೂ ನಡೆದು ಬರುತ್ತಿದೆ. ಅಲ್ಲಿ ಹೋಗಿ ದರ್ಶನ ಪಡೆದ ನಂತರ ಭಕ್ತರು ಸುಖ, ಸಂತೋಷ ಮತ್ತು ಮಾನಸಿಕ ಶಾಂತಿಯನ್ನು ಅನುಭವಿಸುತ್ತಿರುವುದು ಎಲ್ಲರಿಗೂ ವೇದ್ಯವಷ್ಟೇ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>