Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ನೇರ ತೆರಿಗೆ ಶೇ.24, ಪರೋಕ್ಷ ತೆರಿಗೆ ಶೇ.11ರಷ್ಟು ಏರಿಕೆ

$
0
0

ಹೊಸದಿಲ್ಲಿ: ಏಪ್ರಿಲ್‌-ಜನವರಿ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹವು ಶೇ.24ರಷ್ಟು ಮತ್ತು ಪರೋಕ್ಷ ತೆರಿಗೆ ಸಂಗ್ರಹವು ಶೇ.10,79ರಷ್ಟು ಏರಿಕೆಯಾಗಿದೆ. ಜನವರಿ ಅಂತ್ಯದ ಹೊತ್ತಿಗೆ ನೇರ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ 12.85 ಲಕ್ಷ ರೂ. ಸಂಗ್ರಹವಾಗಿದ್ದು, ಸರಕಾರದ ಬೊಕ್ಕಸ ಸೇರಿದೆ.

ಸರಕಾರವು 16.99 ಲಕ್ಷ ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಈಗಾಗಲೇ 12.85 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಅಂದರೆ ಗುರಿಯಲ್ಲಿ ಶೇ.76ರಷ್ಟು ಮುಟ್ಟಿದಂತಾಗಿದೆ.

500 ಮತ್ತು 1000 ರೂ. ನೋಟುಗಳ ಅಮಾನ್ಯತೆ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗುವ ಕಳವಳ ವ್ಯಕ್ತವಾಗಿತ್ತು. ಆದರೆ, ಗುರಿ ಮುಟ್ಟುವ ನಿಟ್ಟಿನಲ್ಲಿ ಸರಕಾರ ಮುಂದೆ ಸಾಗುತ್ತಿದೆ. ಜನವರಿಯಲ್ಲಿ ತೆರಿಗೆ ಸಂಗ್ರಹವು ಶೇ.16.9ರಷ್ಟು ಬೆಳವಣಿಗೆ ಕಂಡಿದೆ. ಜನವರಿ ಅಂತ್ಯದ ಹೊತ್ತಿಗೆ 5.82 ಲಕ್ಷ ಕೋಟಿ ರೂ.ಒಟ್ಟು ನೇರ ತೆರಿಗೆ ಮತ್ತು 7.03 ಲಕ್ಷ ರೂ. ಪರೋಕ್ಷ ತೆರಿಗೆಯನ್ನು ಸಂಗ್ರಹಿಸಲಾಗಿದೆ. ವೈಯಕ್ತಿಕ ಆದಾಯ ತೆರಿಗೆ ಮತ್ತು ಅಬಕಾರಿ ಸುಂಕವು ಈ ಗುರಿ ಸಾಧನೆಗೆ ಪೂರಕವಾಗಿವೆ.

ನೇರ ತೆರಿಗೆಯು ಕಾರ್ಪೊರೇಟ್‌ ವೈಯಕ್ತಿಕ ಆದಾಯ ತೆರಿಗೆಯನ್ನು, ಪರೋಕ್ಷ ತೆರಿಗೆಯು ಅಬಕಾರಿ, ಸೇವಾ ತೆರಿಗೆಗಳು ಮತ್ತು ಅಬಕಾರಿ ಸುಂಕಗಳನ್ನು ಒಳಗೊಂಡಿವೆ. ಕಾರ್ಪೊರೇಟ್‌ ಆದಾಯ ತೆರಿಗೆ ಸಂಗ್ರಹವು ಶೇ.11.7ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.21ರಷ್ಟು ಏರಿಕೆ ಕಂಡು ಬಂದಿದೆ. ಸೇವಾ ತೆರಿಗೆ ಸಂಗ್ರಹವು ಶೇ.22ರಷ್ಟು ಏರಿಕೆಯಾಗಿದ್ದು 2.03 ಲಕ್ಷ ಕೋಟಿ ರೂ.ನಷ್ಟಿದೆ. ಕಳೆದ 10 ತಿಂಗಳಲ್ಲಿ ಕಸ್ಟಮ್‌ ಸುಂಕ ಸಂಗ್ರಹ ಪ್ರಮಾಣವು ಶೇ.4.7ರಷ್ಟು ಏರಿಕೆಯಾಗಿದೆ.

'ತೆರಿಗೆ ಸಂಗ್ರಹವು ಆಶಾದಾಯಕವಾಗಿದೆ. 2016ರ ಸಿಸೆಂಬರ್‌ ಅಂತ್ಯಕ್ಕೆ ಹೋಲಿಸಿದರೆ, 2017ರ ಜನವರಿಯಲ್ಲಿ ಅಬಕಾರಿ ಮತ್ತು ಸೇವಾ ತೆರಿಗೆ ಸಂಗ್ರಹ ಪ್ರಮಾಣವು ಮಂದಗತಿಯಲ್ಲಿದೆ. ಸರಕಾರವು ತೆರಿಗೆ ಸಂಗ್ರಹದಲ್ಲಿ ಹೊಂದಿದ್ದ ಗುರಿಯನ್ನು ಖಂಡಿತ ಸಾಧಿಸಲಿದೆ,' ಎಂದು ಐಸಿಆರ್‌ಎ ಪ್ರಮುಖ ಅರ್ಥಶಾಸ್ತ್ರಜ್ಞ ಅದಿತಿ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.



Viewing all articles
Browse latest Browse all 7056

Latest Images

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ

<script src="https://jsc.adskeeper.com/r/s/rssing.com.1596347.js" async> </script>