Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಪಾಕ್‌ ಉಗ್ರ ರಾಷ್ಟ್ರ, ಒಬ್ಬಂಟಿಯಾಗಿಸುತ್ತೇವೆ: ರಾಜನಾಥ್‌

$
0
0

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ಪಾತಕ ಕೃತ್ಯಕ್ಕೆ ಪಾಕಿಸ್ತಾನವೇ ಕಾರಣ. ಅದೊಂದು ಉಗ್ರರ ರಾಷ್ಟ್ರ ಎಂದು ಜರಿದಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಆ ದೇಶವನ್ನು ವಿಶ್ವ ಸಮುದಾಯದ ಮುಂದೆ ಒಬ್ಬಂಟಿಯಾಗಿಸಬೇಕು ಎಂದು ಗುಡುಗಿದ್ದಾರೆ.

ಉರಿ ದಾಳಿಯ ಬೆನ್ನಿಗೇ ಉನ್ನತ ಅಧಿಕಾರಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಸಚಿವರು, ''ಈ ಭೀಕರ ದಾಳಿಯಿಂದ ತೀವ್ರ ಆಘಾತ ಉಂಟಾಗಿದೆ. ಕೃತ್ಯವೆಸಗಿದ ಭಯೋತ್ಪಾದಕರಿಗೆ ಪಾಕ್‌ನ ನೇರ ಬೆಂಬಲವಿದೆ. ಉಗ್ರರ ದೇಶವಾಗಿರುವ ಪಾಕ್‌ಅನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಆರೋಪಿಯನ್ನಾಗಿ ನಿಲ್ಲಿಸಬೇಕು,'' ಎಂದು ಟ್ವೀಟ್‌ ಮಾಡಿದ್ದಾರೆ.

''ಉಗ್ರರನ್ನು ಬೆಂಬಲಿಸುತ್ತಾ, ಭಯೋತ್ಪಾದನೆ ಹಾಗೂ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ನೇರ ಬೆಂಬಲ ನೀಡುತ್ತಿರುವುದು ಅತೀಮ ಅಸಮಾಧಾನ ತರಿಸಿದೆ. ಉರಿ ದಾಳಿಯಲ್ಲಿ ಪಾಕ್‌ ಬೆಂಬಲಿತ ಉಗ್ರರ ಕೈವಾಡವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ,'' ಎಂದು ರಾಜನಾಥ್‌ ಹೇಳಿದ್ದಾರೆ.

ತಕ್ಕ ಶಾಸ್ತಿ ಮಾಡದೇ ಬಿಡೆವು:

ಭಯೋತ್ಪಾದಕರ ದಾಳಿ ಹೇಡಿ ಕೃತ್ಯ ಎಂದಿರುವ ಪ್ರಧಾನಿ, ಈ ದಾಳಿಯ ಹಿಂದಿರುವವರಿಗೆ ತಕ್ಕ ಶಾಸ್ತಿ ಮಾಡದೇ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಪಾಕ್‌ಗೆ ಕಠಿಣ ಸಂದೇಶ ರವಾನಿಸಿದ್ದಾರೆ. ''ದೇಶದ ಭದ್ರತೆಯಲ್ಲಿ ಹುತಾತ್ಮ ಯೋಧರ ಹೆಸರು ಎಂದೆಂದಿಗೂ ಅಮರವಾಗಿರಲಿದೆ. ದುಃಖ ತಾಳಿಕೊಳ್ಳುವ ಶಕ್ತಿ ಮೃತ ಯೋಧರ ಕುಟುಂಬದವರಿಗೆ ಆ ದೇವರು ದಯಪಾಲಿಸಲಿ,'' ಎಂದು ಪ್ರಾರ್ಥಿಸಿದ್ದಾರೆ.

ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಸೇನೆಗೆ ಇದು ದೊಡ್ಡ ಹೊಡೆತ. ಹದಿನೇಳು ಯೋಧರ ಪ್ರಾಣತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಪಾಕ್‌ ಬೆಂಬಲಿತ ಉಗ್ರ ಸಂಘಟನೆಗಳು ನಡೆಸಿರುವ ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ರಕ್ಷಣಾ ಸಚಿವ ಮನೋಹರ ಪರಿಕರ್‌ ಪ್ರತಿಕ್ರಿಯಿಸಿದ್ದಾರೆ.



Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>